ಬೆಂಗಳೂರು, ಮೇ. 29, ನ್ಯೂಸ್ ಎಕ್ಸ್ ಪ್ರೆಸ್: ನಟ ರವಿಚಂದ್ರನ್ ಮಗಳು ಗೀತಾಂಜಲಿ ಅವರ ಮದುವೆ ಉದ್ಯಮಿ ಅಜಯ್ ಜೊತೆ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ವೈಟ್ ಪೆಟಲ್ಸ್ ಆವರಣದಲ್ಲಿ ನಿರ್ಮಿಸಲಾಗಿದ್ದ ಗಾಜಿನ `ರಾಜಹಂಸದ ವೇದಿಕೆ’ ಯಲ್ಲಿ ನಡೆದಿದೆ. ಕುಟುಂಬದವರ ಸಮ್ಮುಖದಲ್ಲಿ ಅಜಯ್ ಗೀತಾಂಜಲಿ ಅವರಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ.
ಗೀತಾಂಜಲಿ ಕಡು ಹಸಿರು ಬಣ್ಣದ ಗೌನ್ನಲ್ಲಿ ಧರಿಸಿ ಮಿಂಚುತ್ತಿದ್ದರೆ, ಇತ್ತ ವರ ಅಜಯ್ ಕೂಡ ಕಪ್ಪು ಬಣ್ಣದ ಶೂಟ್ ತೊಟ್ಟು ಮಿಂಚಿದ್ದರು. ಸೂಪರ್ ಸ್ಟಾರ್ ರಜಿನಿಕಾಂತ್, ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ನಟ ಸುದೀಪ್ ದಂಪತಿ, ನಿರ್ದೇಶಕ ಪ್ರೇಮ್, ರಕ್ಷಿತಾ, ರಾಕ್ಲೈನ್ ವೆಂಕಟೇಶ್, ಸುಮಲತಾ, ಸುಧಾರಾಣಿ ಸೇರಿದಂತೆ ಇನ್ನೂ ಅನೇಕ ನಟ-ನಟಿಯರು ಪಾಲ್ಗೊಂಡಿದ್ದರು.