ನವ ವಿವಾಹಿತೆ ಅನುಮಾನಾಸ್ಪದ ಸಾವು!

ನವ ವಿವಾಹಿತೆ ಅನುಮಾನಾಸ್ಪದ ಸಾವು!

ಬೆಂಗಳೂರು, ಮಾ.14, ನ್ಯೂಸ್ ಎಕ್ಸ್ ಪ್ರೆಸ್: ನವ ವಿವಾಹಿತೆ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರಂಜಿತ(24) ಮೃತಳಾದ ದುರ್ದೈವಿ ಯುವತಿ. ಈಕೆ ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ಗ್ರಾಮದ ನಿವಾಸಿಯಾಗಿದ್ದು, ತಾಲೂಕು ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಅಶೋಕ್ ಎಂಬುವನ ಜೊತೆ ವಿವಾಹವಾಗಿದ್ದಳು. ಮದುವೆ ನಂತರ ಬೆಂಗಳೂರಿನ ಕೆ.ಆರ್. ಪುರದ ದೇವಸಂದ್ರಕ್ಕೆ ಬಂದು ನೆಲೆಸಿದ್ದು, ಕಳೆದ ರಾತ್ರಿ ತಾವು ವಾಸವಿದ್ದ ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾಳೆ.

ಸ್ಥಳೀಯ ಪೊಲೀಸ್​ ಠಾನೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಿಂದಷ್ಟೇ ರಂಜಿತ ಸಾವಿನ ಅಸಲಿ ಸತ್ಯ ತಿಳಿದು ಬರಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos