ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾ ಮತ್ತೆ ಸದ್ದು ಮಾಡುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಿದ್ದು, ರಾಜ್ಯದಲ್ಲಿ ಪ್ರತಿ ನಿತ್ಯ ಕೊರೋನಾ ಕೇಸ್ಗಳ ಸಂಖ್ಯೆ ನೂರರ ಗಡಿ ದಾಟುತ್ತಿದೆ. ಕಳೆದ 10 ದಿನಗಳಿಂದ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಹೀಗಾಗಿ ಮತ್ತೆ ರಾಜ್ಯಕ್ಕೆ ಕೊರೋನಾ ವಕ್ಕರಿಸುವ ಆತಂಕ ಉಂಟಾಗಿದೆ.
ಕರ್ನಾಟಕ ಮತ್ತೆ ಕೊರೋನಾ ಹಾಟ್ ಸ್ಪಾಟ್ ಗೆ ಸಾಕ್ಷಿ ಆಗ್ತಾಯಿದೆ. ದಿನೇ ದಿನೇ ಕೊರೋನಾ ಕೇಸ್ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಜನವರಿ ತಿಂಗಳು ಹೊಸ ಅಲೆಗೆ ಸಾಕ್ಷಿ ಆಗುತ್ತಾ ಕರ್ನಾಟಕ. ಕೋವಿಡ್ ಸೋಂಕಿತರ ಸಂಖ್ಯೆ 12400ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 298 ಹೊಸ ಕೇಸ್ ಪತ್ತೆಯಾಗಿದೆ.
ಇನ್ನು ಕೊಪ್ಪಳದಲ್ಲಿ ಒಂದೇ ದಿನ ಕೊರೋನಾಗೆ ನಾಲ್ವರು ಬಲಿಯಾಗಿದ್ದಾರೆ. ಈಗಲಾದರೂ ಆರೋಗ್ಯ ಇಲಾಖೆಯಿಂದ ಒಂದಿಷ್ಟು ಗೈಡ್ ಲೈನ್ಸ್ ಹೊರ ಬೆಳುತಾ ಎಂದು ಕಾದು ನೋಡಬೇಕಿದೆ.