ಚಿಕ್ಕಮಗಳೂರು, ಅ. 25: ಮಲೆನಾಡಿಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಂಗಳೂರು ಸೇರಿ ಸಾಕಷ್ಟು ಕಡೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಕಾಫಿನಾಡಾದ ಮಲೆನಾಡಲ್ಲಿ ಭಾರೀ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟ್ನಲ್ಲಿ ವಾಹನ ಸವಾರರ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದ ಹೇಮಾವತಿ ನದಿಯ ಹರಿವು ಹೆಚ್ಚಿದೆ. 2 ತಿಂಗಳ ಹಿಂದಿನ ಮಳೆಗೆ ಸೇತುವೆ ಕೊಚ್ಚಿ ಹೋಗಿತ್ತು. ಹೀಗಾಗಿ ಸ್ಥಳಿಯರೇ ಕಾಲುಸಂಕ ನಿರ್ಮಿಸಿದ್ದರು. ಈಗ ಕಾಲು ಸಂರ್ಪಕ ಕೂಡ ಹೇಮಾವತಿ ಪಾಲಾಗಿದೆ. ಪರಿಣಾಮ, ಕೆಲವು ಸಂಪರ್ಕ ಕಡಿತಗೊಂಡಿದ್ದು, ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿದೆ.