ಶಿವಮೊಗ್ಗ, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ಜಾತಿ ಜಾತಿ ನಡುವೆ ಬೆಂಕಿ ಹಚ್ಚಿದ್ದು, ಕಾಂಗ್ರೆಸ್ ಸರಕಾರ ಹೋಗಲು ಸಿದ್ದರಾಮಯ್ಯ ಅವರೇ ಕಾರಣ. ಕಾಂಗ್ರೆಸ್ ಪಕ್ಷದಿಂದಲೇ ಸಿದ್ದರಾಮಯ್ಯರನ್ನು ಸಸ್ಪೆಂಡ್ ಮಾಡಬೇಕು ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಅತಂತ್ರ ಮಾಡಲು ಕಾಂಗ್ರೆಸ್ ನವರೇ ಪ್ರಯತ್ನಿಸ್ತಾ ಇದ್ದಾರೆ. ಸಿದ್ದರಾಮಯ್ಯ ಸಹ ಟವಲ್ ಹಾಕಿಕೊಂಡು ಕುಳಿತಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಕುಮ್ಮಕ್ಕು ಕೊಡ್ತಾ ಇರೋದೆ ಸಿದ್ದರಾಮಯ್ಯ.ಇನ್ನೊಂದೆಡೆ ದಿನೇಶ್ ಗುಂಡೂರಾವ್, ಪರಮೇಶ್ವರ್ ಸಹ ಪ್ರಯತ್ನ ಮಾಡ್ತಾ ಇದ್ದಾರೆ. ಕಾಂಗ್ರೆಸ್ ನಲ್ಲಿ ಎರಡು ಗುಂಪು ಮಾಡ್ಕೊಂಡು ಬಡಿದಾಟ ಮಾಡ್ತಾ ಇದಾರೆ. ಮೇ 23 ರ ನಂತರ ಇದು ಇನ್ನೂ ಜಾಸ್ತಿಯಾಗುತ್ತೆ ಎಂದು ಇದೇ ವೇಳೆ ತಿಳಿಸಿದರು. ಸಿದ್ದರಾಮಯ್ಯನಿಗೆ ನಾಚಿಕೆ ಮರ್ಯಾದೆ ಇಲ್ಲ, ಅವರದ್ದು ತಿರುಕನ ಕನಸು. ಯಡಿಯೂರಪ್ಪ ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ನಾಚಿಕೆ ಮಾನ, ಮರ್ಯಾದೆ ಯಾರಿಗಿಲ್ಲ ಮೊದಲು ತಿಳಿದುಕೊಳ್ಳಲಿ. ಸರ್ಕಾರ ಅತಂತ್ರಗೊಳಿಸಿ, ಅಧಿಕಾರಕ್ಕಾಗಿ ಬಡಿದಾಡುತ್ತಿರುವ ಇವರಿಗೆ ಇದೆಯಾ…?? ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು.