ಕಾಂಗ್ರೆಸ್ ಸರ್ವನಾಶ ಮಾಡೋಕೆ ಸಾಧ್ಯವಿಲ್ಲ

ಕಾಂಗ್ರೆಸ್ ಸರ್ವನಾಶ ಮಾಡೋಕೆ ಸಾಧ್ಯವಿಲ್ಲ

ಹುಬ್ಬಳ್ಳಿ,ಅ. 24 : ಕಾಂಗ್ರೆಸ್ ಸರ್ವನಾಶ ಮಾಡೋಕೆ ಎಷ್ಟೇ ಪ್ರಯತ್ನ ಮಾಡಿದ್ರು. ಆದ್ರೆ ಅದು ಸಾಧ್ಯವಿಲ್ಲ ಎನ್ನುವುದಕ್ಕೆ ಇಂದಿನ ಫಲಿತಾಂಶವೇ ಉದಾಹರಣೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಬೇಕೆಂದು ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಲಾಗಿತ್ತು.
ಧೂಳಿಪಟ ಆಗುತ್ತೆ ಅಂತ ಹೇಳಿದ್ರು. ಆದರೆ ಹರಿಯಾಣದಲ್ಲಿ ಜನಾದೇಶ ಸರ್ಕಾರದ ವಿರುದ್ಧವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸಂಖ್ಯಾಬಲ ಕುಸಿದಿದೆ ಎಂದರು. ಎರಡೂ ರಾಜ್ಯಗಳಲ್ಲಿ ಮೋದಿ, ಶಾ ಹೆಚ್ಚು ರ್ಯಾಲಿ ಮಾಡಿದ್ದಾರೆ. ಆದ್ರೆ ಜನ ಅವರಿಂದ ನಿರಾಶೆರಾಗಿದ್ದಾರೆ ಎನ್ನೋದು ಗೊತ್ತಾಗಿದೆ. ಎಲ್ಲ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಂಡ್ರ ಅವರಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos