ಬಿಎಸ್ವೈ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಸತ್ ಎದುರು ಕಾಂಗ್ರೆಸ್ ಪ್ರತಿಭಟನೆ

ಬಿಎಸ್ವೈ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಸತ್ ಎದುರು ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ
ಕುದುರೆ ವ್ಯಾಪಾರಕ್ಕಿಳಿದಿದ್ದು, ಕೋಟಿ ಕೋಟಿ ರೂ.ಗಳನನ್ನು ಕೊಟ್ಟು ಕಾಂಗ್ರೆಸ್​ ಶಾಸಕರನ್ನು
ಡೀಲ್​ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರು ಸಂಸತ್​ ಭವನದ ಮುಂದೆ ಸೋಮವಾರ
ಪ್ರತಿಭಟನೆ ನಡೆಸಿದರು.

ಸಂಸತ್​ ಕಲಾಪ ಆರಂಭಕ್ಕೂ ಮುನ್ನ ಪಾರ್ಲಿಮೆಂಟ್​ ಭವನದ ಎದುರಿರುವ ಗಾಂಧಿ ಪ್ರತಿಮೆ ಬಳಿ ಸಮಾವೇಶಗೊಂಡ  ಮಲ್ಲಿಕಾರ್ಜುನ್​ ಖರ್ಗೆ, ವೀರಪ್ಪ ಮೊಯ್ಲಿ, ಮುನಿಯಪ್ಪ, ಧೃವ ನಾರಾಯಣ್​, ಡಿ.ಕೆ. ಸುರೇಶ್​ ಸೇರಿದಂತೆ  ಕಾಂಗ್ರೆಸ್​ ಹಿರಿಯ ನಾಯಕರು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು. 

ಕರ್ನಾಟಕ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಆಡಿಯೊ ಕ್ಲಿಪ್​ನಿಂದ ಮಾಜಿ ಸಿಎಂ ಬಿಎಸ್​ವೈ ನಡೆಸಿರುವ ಕುದುರೆ ವ್ಯಾಪಾರ ಬಹಿರಂಗವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಿಎಸ್​ವೈ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಆಪರೇಷನ್​ ಕಮಲದಿಂದ ಸಂವಿಧಾನದ ಕೊಲೆಯಾಗುತ್ತಿದೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಮಾರಾಟಕ್ಕಿದೆ, ಕುದುರೆ ವ್ಯಾಪಾರ ಬೇಡ ಎಂಬ ಪ್ಲೇಕಾರ್ಡ್​ಗಳನ್ನು ಹಿಡಿದು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದರ.

ಫ್ರೆಶ್ ನ್ಯೂಸ್

Latest Posts

Featured Videos