ಕಾಂಗ್ರೆಸ್‍ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ, ವದಂತಿಗಳೆಲ್ಲವೂ ಸುಳ್ಳು: ಬಿಎಸ್‍ವೈ

ಕಾಂಗ್ರೆಸ್‍ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ, ವದಂತಿಗಳೆಲ್ಲವೂ ಸುಳ್ಳು: ಬಿಎಸ್‍ವೈ

ನವದೆಹಲಿ: ಕಾಂಗ್ರೆಸ್​ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಊಹಾಪೋಹಗಳು ಶುದ್ಧ ಸುಳ್ಳು ಎಂದು ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನ  3 ಶಾಸಕರು ಮುಂಬೈನಲ್ಲಿದ್ದು, ಅವರೆಲ್ಲರೂ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬುದು ಸಳ್ಳು. ಇದು ಕಾಂಗ್ರೆಸ್​-ಜೆಡಿಎಸ್​ ನಡುವೆಯಷ್ಟೆ ಹರಿದಾಡುತ್ತಿರುವ ಗಾಳಿ ಸುದ್ದಿ. ಇದಕ್ಕೂ ನಮಗೂ ಸಂಬಂಧವಿಲ್ಲ. ನಾವು ನಮ್ಮ ಶಾಸಕರಿಗೆ ಹೇಗೆ ಬಲ ತುಂಬಬಹುದು ಎಂಬ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದೇವೆ. ಇದಕ್ಕೂ ಮುನ್ನ ಮಾತನಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಜತೆ ಸಂಪರ್ಕದಲ್ಲಿದ್ದು, ಮುಂಬೈನಲ್ಲಿರುವ ಕಾಂಗ್ರೆಸ್​ನ 3 ಶಾಸಕರು ಯಾರೆಂಬುದು ನಮಗೆ ಗೊತ್ತು. ಅವರಿಂದ ಸರ್ಕಾರಕ್ಕೆ ಯಾವುದೇ ಅಭದ್ರತೆ ಇಲ್ಲ ಎಂದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos