ಬೆಂಗಳೂರು, ಜು . 15 : ನಗರದ ತಾಜ್ ವಿವಾಂತ್ ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಸಭೆಯ ಬಳಿಕ, ಕೈ ನಾಯಕರು ಕಿತ್ತಾಡಿಕೊಂಡ ಘಟನೆ ನಡೆದಿದೆ. ಮಾಜಿ ಶಾಸಕ ಪರಮೇಶ್ವರ್ ನಾಯ್ಕ್ ಮತ್ತು ಶಾಸಕ ಪುಟ್ಟರಂಗಶೆಟ್ಟಿ ಪರಸ್ಪರ ಜಗಳ ಮಾಡಿದ್ದಾರೆ.ಇಂದು ವಿಧಾನಮಂಡಲದ ಅಧಿವೇಶನಕ್ಕೂ ಮುನ್ನಾ ಬೆಳಿಗ್ಗೆ 9 ಗಂಟೆಗೆ ನ್ಯಾಷನಲ್ ಹೈವೇ 4ರಲ್ಲಿ ಬರುವ ಗೊರಗುಂಟೆ ಪಾಳ್ಯದ ಬಳಿಯ ತಾಜ್ ವಿವಾಂತ್ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕ ಶಾಸಕಾಂಗ ಸಭೆ ನಡೆಯಿತು. ದೋಸ್ತಿ ಸರ್ಕಾರವನ್ನು ಉಳಿಸುವ ನಿಟ್ಟಿನಲ್ಲಿ, ಕೈ ನಾಯಕರು ಬಿಸಿ ಬಿಸಿ ಚರ್ಚೆಯನ್ನು ನಡೆಸಿದರು.
ಈ ಸಭೆಯ ಬಳಿಕ ಹೊರ ಬಂದ ಮಾಜಿ ಶಾಸಕ ಪರಮೇಶ್ವರ್ ನಾಯ್ಕ ಮತ್ತು ಶಾಸಕ ಪುಟ್ಟರಂಗಶೆಟ್ಟಿಯವರು ಹೋಟೆಲ್ ನ ಮುಂದೆ ಪರಸ್ಪರ ಏಕವಚನದಲ್ಲೇ ಜಗಳ ಆಡಿದ್ದಾರೆ ಎಂದು ಹೇಳಲಾಗಿದೆ. ಹೀಗೆ ಕೈ ನಾಯಕರಿಬ್ಬರು ಯಾಕೆ ಕಿತ್ತಾಡಿದ್ದನ್ನು ಕಂಡ ಕಾಂಗ್ರೆಸ್ ನಾಯಕರು ಅವರಿಬ್ಬರನ್ನು ಸಮಾಧಾನ ಮಾಡಿ ಕಳಿಸಿದ್ದಾರೆ. ಆದರೇ ಕಿತ್ತಾಟಕ್ಕೆ, ಜಗಳಲ್ಲಿ ಏನ್ ಕರಣ ಎಂಬ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.