‘ಕೈ’ ನಾಯಕರ ಕಿತ್ತಾಟ

 ‘ಕೈ’ ನಾಯಕರ ಕಿತ್ತಾಟ

ಬೆಂಗಳೂರು, ಜು . 15 : ನಗರದ ತಾಜ್ ವಿವಾಂತ್ ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಸಭೆಯ ಬಳಿಕ, ಕೈ ನಾಯಕರು ಕಿತ್ತಾಡಿಕೊಂಡ ಘಟನೆ ನಡೆದಿದೆ. ಮಾಜಿ ಶಾಸಕ ಪರಮೇಶ್ವರ್ ನಾಯ್ಕ್ ಮತ್ತು ಶಾಸಕ ಪುಟ್ಟರಂಗಶೆಟ್ಟಿ ಪರಸ್ಪರ ಜಗಳ ಮಾಡಿದ್ದಾರೆ.ಇಂದು ವಿಧಾನಮಂಡಲದ ಅಧಿವೇಶನಕ್ಕೂ ಮುನ್ನಾ ಬೆಳಿಗ್ಗೆ 9 ಗಂಟೆಗೆ ನ್ಯಾಷನಲ್ ಹೈವೇ 4ರಲ್ಲಿ ಬರುವ ಗೊರಗುಂಟೆ ಪಾಳ್ಯದ ಬಳಿಯ ತಾಜ್ ವಿವಾಂತ್ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕ ಶಾಸಕಾಂಗ ಸಭೆ ನಡೆಯಿತು. ದೋಸ್ತಿ ಸರ್ಕಾರವನ್ನು ಉಳಿಸುವ ನಿಟ್ಟಿನಲ್ಲಿ, ಕೈ ನಾಯಕರು ಬಿಸಿ ಬಿಸಿ ಚರ್ಚೆಯನ್ನು ನಡೆಸಿದರು.

ಈ ಸಭೆಯ ಬಳಿಕ ಹೊರ ಬಂದ ಮಾಜಿ ಶಾಸಕ ಪರಮೇಶ್ವರ್ ನಾಯ್ಕ ಮತ್ತು ಶಾಸಕ ಪುಟ್ಟರಂಗಶೆಟ್ಟಿಯವರು ಹೋಟೆಲ್ ನ ಮುಂದೆ ಪರಸ್ಪರ ಏಕವಚನದಲ್ಲೇ ಜಗಳ ಆಡಿದ್ದಾರೆ ಎಂದು ಹೇಳಲಾಗಿದೆ. ಹೀಗೆ ಕೈ ನಾಯಕರಿಬ್ಬರು ಯಾಕೆ ಕಿತ್ತಾಡಿದ್ದನ್ನು ಕಂಡ ಕಾಂಗ್ರೆಸ್ ನಾಯಕರು ಅವರಿಬ್ಬರನ್ನು ಸಮಾಧಾನ ಮಾಡಿ ಕಳಿಸಿದ್ದಾರೆ. ಆದರೇ ಕಿತ್ತಾಟಕ್ಕೆ, ಜಗಳಲ್ಲಿ ಏನ್ ಕರಣ ಎಂಬ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos