ಸಂಗೂಳ್ಳಿ ರಾಯಣ್ಣ ಮೂರ್ತಿ ತೆರವಿಗೆ ಖಂಡನೆ

ಸಂಗೂಳ್ಳಿ ರಾಯಣ್ಣ ಮೂರ್ತಿ ತೆರವಿಗೆ ಖಂಡನೆ

ಹೊಸಕೋಟೆ:ಬೆಳಗಾವಿ ತಾಲ್ಲೂಕು ಪಿರನವಾಡಿ ಗ್ರಾಮದಲ್ಲಿ ಸ್ವಾತಂತ್ಯ ಹೋರಾಟಗಾರ ಹುತಾತ್ಮ ಕ್ರಾಂತಿವೀರ ಸಂಗೂಳ್ಳಿ ರಾಯಣ್ಣವರ ಮೂರ್ತಿಯನ್ನು ಕಿತ್ತು ಹಾಕಿದ ಕಿಡಿಗೇಡಿಗಳ ವಿರುದ್ಧ ಕಾನುನೂ ಕ್ರಮ ಕೈಗೂಳ್ಳುವಂತೆ ತಾಲ್ಲೂಕು ಕಛೇರಿ ಮುಂದೆ, ಕ್ರಾಂತಿವೀರ ಸಂಗೂಳ್ಳಿ ರಾಯಣ್ಣ ಯುವ ಘರ್ಜನೆ, ಕರ್ನಾಟಕ ರಾಜ್ಯ ಕನಕ ಯುವ ಸೇನೆ, ಕುರುಬರ ಸಂಘ, ವಿಶ್ವ ನಿರ್ಮಾಣ ಸೇನೆ, ಕರ್ನಾಟಕ ರಕ್ಷಣೆ ವೇದಿಕೆ ಪ್ರತಿಭಟನೆ ನಡೆಸಿತು.

ಆಗಸ್ಟ್ ೧೫ ರಂದು ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದರು ಮಾರನೇ ದಿನ ಬೆಳಗಿನ ಜಾವ ಅಲ್ಲಿನ ಪೊಲೀಸರು ಏಕಾಏಕಿ ತೆರವುಗೂಳಿಸಿರುವುದನ್ನು ಎಲ್ಲಾ ಸಂಘಟನೆಗಳು ಖಂಡಿಸುತ್ತವೆ. ಮತ್ತೆ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸದ ಹೋದರೆ ರಾಜ್ಯ ವ್ಯಾಪಿ ಉಗ್ರ ಪ್ರತಿಭಟನೆ ಮಾಡುವುದಾಗಿ ಮುಖ್ಯ ಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರಕ್ಕೆ ಸಂಘಟನೆಗಳು ಎಚ್ಚರಿಕೆ ನೀಡಿವೆ.

 

ಫ್ರೆಶ್ ನ್ಯೂಸ್

Latest Posts

Featured Videos