ಪೀಣ್ಯ ದಾಸರಹಳ್ಳಿ, ಅ. 8: ಸೇನೆಯ ವಿಂಗ್ ಕಮ್ಯಾಂಡರ್ ಕಾಂಪೌಂಡ್ ಗೋಡೆ ಕುಸಿದು, ವ್ಯಕ್ತಿ ಸಾವನ್ನಪ್ಪಿ, ಇನ್ನಬ್ಬರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ.
ಬೆಂಗಳೂರಿನ ಜಾಲಹಳ್ಳಿ ಬಳಿಯ ಅಯ್ಯಪ್ಪ ಟೆಂಪಲ್ ಬಳಿ ಈ ಅವಘಡ ನಡೆದಿದ್ದು, ಪಾದಚಾರಿ ಪರಮೇಶ್ವರ್ ಎಂಬವರು ಸಾವನ್ನಪ್ಪಿದ್ದಾರೆ. ವರುಣ್ ಮತ್ತು ಕಲ್ಯಾಣಿ ಎಂಬುವರಿಗೆ ಗಂಭೀರ ಗಾಯವಾಗಿದೆ. ಇನ್ನೂ ಜಾಲಹಳ್ಳಿ ರಸ್ತೆಯಲ್ಲಿರುವ ಸೇನೆಯ ಆವರಣದಲ್ಲಿ ಈ ಘಟನೆಯಾಗಿದ್ದು, ಸೇನೆಯ ಕಾಂಪೌಂಡ್ ಬಿದ್ದ ತಕ್ಷಣ ಬೈಕ್ ಪಕ್ಕದಲ್ಲಿದ್ದ ಈ ಮೂವರಲ್ಲಿ ಒರ್ವ ಮೃತನಾದರೇ, ಇನ್ನಿಬ್ಬರಿಗೆ ಗಂಭೀರ ಗಾಯವಾಗಿದೆ. ಇನ್ನೂ ಗಂಭೀರ ಗಾಯವಾದ ವರುಣ್ ಮತ್ತು ಕಲ್ಯಾಣಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾಂಪೌಂಡ್ ಗೋಡೆ ಕುಸಿಯುತ್ತಿದ್ದಂತೆ ಗೋಡೆ ಪಕ್ಕದಲ್ಲಿದ್ದ ಬೈಕ್ ಗಳು ಗೋಡೆಯ ಅವಶೇಶದ ಅಡಿ ಸಿಲುಕಿ ಬೈಕ್ ಸಂಪೂರ್ಣವಾಗಿ ಜಖಂ ಗೊಂಡಿದೆ. ಘಟನೆ ನಡೆಯುತ್ತಿದಂತೇ ಸ್ಥಳೀಯರೇ ರಕ್ಷಣಾ ಕಾರ್ಯ ನಡೆಸಿದ್ದು, ಘಟನೆ ಸಂಬಂಧ ಗಂಗಮ್ಮನಗುಡಿ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.