ಹಾಸನ, ನ. 15 : 14 ಜನ ಅನರ್ಹರನ್ನು ಮಂತ್ರಿ ಮಾಡುತ್ತೇವೆ ಎಂದು ಮತ ಹಾಕಿಸಿಕೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತಂತ್ರವಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಶುಕ್ರವಾರ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಚುನಾವಣೆ ಪಾವಿತ್ರ್ಯತೆ ಎಲ್ಲಿ ಉಳಿಯಿತು. ಮಂತ್ರಿ ಮಾಡುತ್ತಾರೆ ಎಂದು ಜನರು ಮತ ಹಾಕುತ್ತಾರೆ ಎಂಬ ಭಾವನೆಯಲ್ಲಿ ಹೇಳಿದ್ದಾರೆ. ಉಪಚುನಾವಣೆಯಲ್ಲಿ ನಡೆಯೋದಿಲ್ಲ ಎಂದು ಹೇಳಿದರು.
ಇನ್ನು ನಾವು ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುತ್ತೇವೆ. ಅನರ್ಹ ಶಾಸಕರಿಗೆ ಸರ್ಕಾರ ಆಸೆ ಆಮಿಷ ತೋರುತ್ತಿದೆ. ಇಂತಹ ಬೆಳವಣಿಗೆ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವುದು ದುರದೃಷ್ಟಕರವಾದುದ್ದು ಎಂದು ಬಿಎಸ್ವೈ ವಿರುದ್ಧ ಗುಡುಗಿದರು.