‘ಬಿಜೆಪಿ’ ಪರ ‘ಕೈ’ ಶಾಸಕ ಬ್ಯಾಟಿಂಗ್..! 

‘ಬಿಜೆಪಿ’ ಪರ ‘ಕೈ’ ಶಾಸಕ ಬ್ಯಾಟಿಂಗ್..! 

ಬೆಂಗಳೂರು, ಮೇ. 22, ನ್ಯೂಸ್ ಎಕ್ಸ್ ಪ್ರೆಸ್: ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ. ಸುಧಾಕರ್​ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಎಕ್ಸಿಟ್ ಪೋಲ್​ ಫಲಿತಾಂಶ ಬಂದ ನಂತರ ಇವಿಎಂ ಮತಯಂತ್ರಗಳಲ್ಲಿ ಟ್ಯಾಂಪರಿಂಗ್​ ಮಾಡಲಾಗಿದೆ ಎಂಬ ಆರೋಪ  ಮಾಡಲಾಗ್ತಿದೆ ಎಂದು  ಶಾಸಕ ಡಾ. ಸುಧಾಕರ್​ ಟ್ವೀಟ್ ಮಾಡಿದ್ದಾರೆ. ‘ಎಕ್ಸಿಟ್ ಪೋಲ್’ ನಿಜವಾಗಲೂ ಜನರ ಮನದಲ್ಲಿರುವ ಅಭಿಪ್ರಾಯವನ್ನು ​ತಿಳಿಸುತ್ತಿದೆ ಹೀಗಂತ ಪರೋಕ್ಷವಾಗಿ ‘ಮೈತ್ರಿ’ ಸಾರ್ಕಾದ ಕುರಿತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.  ಕಾಂಗ್ರೆಸ್​ನ  ನಾಯಕ ರೋಷನ್ ಬೇಗ್ ಪಕ್ಷದ ರಾಜ್ಯ ನಾಯಕರ ವಿರುದ್ಧ ಸಿಡಿದೆದ್ದ ಬೆನ್ನಲ್ಲೇ, ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ  ಸುಧಾಕರ್  ಟ್ವೀಟ್ ಮಾಡಿರೋದು ಸಾಕಷ್ಟು ಗೊಂದಲ ಹುಟ್ಟುಹಾಕಿದೆ.

ಬಿಜೆಪಿ ಸೇರ್ತಾರಾ ಸುಧಾಕರ್..?

ಈ ಹಿಂದೆ ಶಾಸಕ ಸುಧಾಕರ್‍ ಬಿಜೆಪಿ ಸೇರ್ತಾರೆ ಎಂಬ ಸುದ್ದಿಗಳಿದ್ದವು. ಕುಮಾರಸ್ವಾಮಿ ವಿರುದ್ಧ ನೇರವಾಗಿ ಸುಧಾಕರ್ ಹರಿಹಾಯ್ದಿದ್ದರು. ಕಾಂಗ್ರೆಸ್‍ನ 20 ಶಾಸಕರು ಬಿಜೆಪಿ ಸೇರ್ತಾರೆ ಅಂತ ಯಡಿಯೂರಪ್ಪ ಹೇಳಿದ ಬೆನ್ನಲ್ಲೇ ಸುಧಾಕರ್‍ ಈ ರೀತಿ ಟ್ವೀಟ್ ಮಾಡಿರೋದು ಸಾಕಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos