ಕಾಫಿ ಡೇ ಗೆ ರಜೆ

ಕಾಫಿ ಡೇ ಗೆ ರಜೆ

ನೆಲಮಂಗಲ, ಜು. 31: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ ಸಾವಿನ ಹಿನ್ನಲೆ, ನಿರಾವ ಮೌನಕ್ಕೆ ಜಾರಿದ ಕಾಫಿ ಡೇ, ನೆಲಮಂಗಲ ತಾಲೂಕಿನ ಹೊಸನಿಜಗಲ್ ಕಾಫಿ ಡೇ ಗೆ ರಜೆ.

ಕಾಫಿ ಡೇ ಸಾಮ್ರಾಟ ಸಿದ್ದಾಥ್೯ ಸಾವಿನ ಹಿನ್ನಲೆಯಲ್ಲಿ, ನೆಲಮಂಗಲ ತಾಲೂಕಿನ ಹೊಸನಿಜಗಲ್ ಬಳಿಯಿರುವ ಕಾಫಿ ಡೇ ನಿನ್ನೇ ರಾತ್ರಿಯಿಂದಲೇ ಗ್ರಾಹಕರ ಸಂಖ್ಯೆ ತೀರ ಇಳಿಮುಖವಾಗಿದೆ, ಅಲ್ಲದೇ ಇಂದು ಕಾಫಿ ಡೇ ಮಳಿಗೆಗೆ ರಜೆ ನೀಡಲಾಗಿದೆ. ಇನ್ನೂ ಇಡೀ ಕಾಫಿ ಡೇ ಮಳಿಗೆಯಲ್ಲಿ ನಿರಾವ ಮೌನವಾಗಿದೆ. ಇನ್ನೂ ತಮ್ಮ ಮಾಲೀಕನ ಸಾವುನ ಮಾಹಿತಿ ಕೇಳಿ ಸಿಬ್ಬಂದಿಗಳು ರೋದನದಲ್ಲಿ ತೊಡಗಿದ್ದರೂ, ನಮ್ಮ ಮಾಲೀಕರಾದ ಸಿದ್ದಾಥ್೯ ಸಾವಿನ ಹಿಂದಿನ ರಹಸ್ಯ ಪತ್ತೆ ಹಚ್ಚಬೇಕು. ನಮ್ಮ ಕಂಪನಿಗೆ ಮುಂದಿನ ದಿಕ್ಕೇನೂ ಎಂಬಂತೆ ಸಿಬ್ಬಂದಿಗಳು ನೋವಿನಿಂದ ಕಾಲದೂರುತ್ತಿದ್ದು, ಸಿದ್ದಾರ್ಥ ರ ಅಂತ್ಯ ಸಂಸ್ಕಾರಕ್ಕೆ ನಾವೇಲ್ಲ ತೆರಳುತ್ತೇವೆ ಎಂದು ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos