ಸಿಎಂ ವಿರುದ್ಧ ಬಿಜೆಪಿ ದೂರು

ಸಿಎಂ ವಿರುದ್ಧ ಬಿಜೆಪಿ ದೂರು

ಬೆಂಗಳೂರು, . 26, ನ್ಯೂಸ್ ಎಕ್ಸ್ ಪ್ರೆಸ್: ಪುಲ್ವಾಮಾ ದಾಳಿ ನಡೆಯುವುದಕ್ಕೂ ಮೊದಲೇ ತಮಗೆ ಗೊತ್ತಿತ್ತು ಎಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ  ಅವರ ವಿರುದ್ಧ ಬಿಜೆಪಿಯ ಎಸ್ ಸಿ ಮೋರ್ಚಾದಿಂದ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.

ಈ ಹೇಳಿಕೆಯ ಬಗ್ಗೆ ಆಕ್ಷೇಪಿಸಿರುವ ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು ಮತ್ತು ಬಿಜೆಪಿ ಮುಖಂಡರು ಇಂದು ಸಿಎಂ ವಿರುದ್ದ ವಿಧಾನಸೌಧ ಠಾಣೆಗೆ ದೂರು ಸಲ್ಲಿಸಿದ್ದಾರೆ.

ವಿಧಾನಸೌಧ ಠಾಣೆಯಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಬಿಜೆಪಿ ಎಸ್ ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು, ಮುಖಮಂತ್ರಿ ಅವರು 2 ವರ್ಷಕ್ಕೂ ಮೊದಲೇ ಈ ಘಟನೆ ನನಗೆ ಗೊತ್ತಿತ್ತು ಎಂದು ಹೇಳಿದ್ದಾರೆ. ಈ ದೇಶದ ಮುಖ್ಯಮಂತ್ರಿಯಾಗಿ ಈ ದೇಶದ ರಕ್ಷಣಾ ವಿಚಾರವನ್ನು ಗೌಪ್ಯವಾಗಿ ಇಟ್ಟಿದ್ದು ಏಕೆ?.

ಈ ಬಗ್ಗೆ ಕೂಡಲೇ ಪೊಲೀಸ್ ಇಲಾಖೆಗೆ ತಿಳಿಸಬೇಕಾಗಿತ್ತು. ಹೀಗೆ ಮಾಡದ ಮುಖ್ಯಮಂತ್ರಿಗಳ ನಡೆ ಹಿನ್ನಲೆಯಲ್ಲಿ ಸಂಮ್ಮಿಧಾನದ ವಿರೋಧಿಗಳಾಗಿ ನಡೆದುಕೊಂಡಿದ್ದಾರೆ. ದೇಶದ ಭದ್ರತಾ ಕಾಯ್ದೆಗಳ ಅಡಿಯಲ್ಲಿ, ಭಯೋತ್ಪಾದಕಾ ನೀಗ್ರಹದ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos