ಸಿಎಂ ವಿರುದ್ಧ ಯಡ್ಡಿಯೂರಪ್ಪ ವ್ಯಂಗ್ಯ

ಸಿಎಂ ವಿರುದ್ಧ ಯಡ್ಡಿಯೂರಪ್ಪ ವ್ಯಂಗ್ಯ

ಹುಬ್ಬಳ್ಳಿ, ಮೇ.10, ನ್ಯೂಸ್ ಎಕ್ಸ್ ಪ್ರೆಸ್ : ಲೋಕಸಭಾ ಚುನಾವಣೆಯಲ್ಲಿ ನಮ್ಮ ತಂದೆ ಹಾಗೂ ಮಗ ಸೋಲ್ತಾರೆ ಅನ್ನೋ ಗೊಂದಲ ಸಿಎಂ ಕುಮಾರಸ್ವಾಮಿಗೆ ಇದೆ. ಹೀಗಾಗಿ ಅವರು ರೆಸಾರ್ಟ್ ಗೆ ಹೋಗುವಂಥ ವಾತವಾರಣ ನಿರ್ಮಾಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,  ರಾಜ್ಯದಲ್ಲಿ ಭೀಕರ ಬರಗಾಲ ಇದೆ. ರಾಜ್ಯ ಸರ್ಕಾರದ ಬ್ರೇನ್ ಡೆಡ್ ಆಗಿದೆ. ಕುಮಾರಸ್ವಾಮಿ, ದೇವೇಗೌಡರು ರೆಸಾರ್ಟ್ ಗೆ ಹೋಗುತ್ತಿರುವುದು ಮೈತ್ರಿಯಲ್ಲಿ ಭುಗಿಲೆದ್ದ ವಾತಾವರಣಕ್ಕೆ ಸಾಕ್ಷಿ. ಮಂಡ್ಯದಲ್ಲಿ ಸುಮಲತಾ ಅಂಬರೀಷ್ 1 ಲಕ್ಷ ಮತಗಳ ಅಂತರದಲ್ಲಿ ಗೆದ್ದಾಗಿದೆ. ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಕಾಂಗ್ರೆಸ್  ಕೆಲವು ಪ್ರಭಾವಿ ನಾಯಕರು ಸೋತು ಮನೆಗೆ ಹೋಗ್ತಾರೆ ಎಂದರು.

 ಕುಂದಗೋಳ, ಚಿಂಚೋಳಿ ಉಪ ‘ಸಮರ’:

ಇತ್ತೀಚಿಗೆ ನಿಧನರಾದ ಸಿ.ಎಸ್ ಶಿವಳ್ಳಿ ಹಾಗೂ ಉಮೇಶ ಜಾಧವ್ ರಾಜೀನಾಮೆ ಹಿನ್ನಲೆಯ ಉಪಚುನಾವಣೆಯಲ್ಲಿ ಕುಂದಗೋಳ, ಚಿಂಚೋಳಿ ಕ್ಷೇತ್ರದಲ್ಲಿ ನಡೆಯಲಿದೆ. ಈ ಚುನಾವಣೆಯಲ್ಲಿ ಜನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸ್ತಾರೆ. ನಾವು ಲೋಕಸಭಾ ಚುನಾವಣೆಯಲ್ಲಿ 22 ಸ್ಥಾನ ಗೆಲ್ತೇವೆ ಅಂತಾ ಬಿಎಸ್ ವೈ ಭವಿಷ್ಯ ನುಡಿದರು. ಸಿ.ಎಸ್ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರ ಕಾರಣ ಎಂಬ ರಾಮುಲು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರದಿಂದ ಕಿರುಕುಳ ಇತ್ತು ಅಂತಾ ಹೇಳಿದ್ದಾರೆ ಅಷ್ಟೇ. ಅವರು ಎಚ್ಚರಿಕೆಯಿಂದ ಮಾತನಾಡಿದ್ದಾರೆ. ಇದಕ್ಕೆ ಅಪಾರ್ಥ ಕಲ್ಪಿಸೋದು ಬೇಡ ಅಂತಾ ಸಮರ್ಥಿಸಿಕೊಂಡರು.

ಫ್ರೆಶ್ ನ್ಯೂಸ್

Latest Posts

Featured Videos