ಹುಬ್ಬಳ್ಳಿ, ಏ. 19, ನ್ಯೂಸ್ ಎಕ್ಸ್ ಪ್ರೆಸ್: ಮಾಧ್ಯಮಗಳ ಮೇಲೆಯೇ ಸಿಎಂ ಕುಮಾರಸ್ವಾಮಿ ಕೆಂಡಾಮಂಡಲರಾದ ಘಟನೆ ನಗರದಲ್ಲಿ ನಡೆಯಿತು. ನೀವು ಮೋದಿಗಿಂತಲೂ ಹೆಚ್ಚಿನ ಪ್ರಚಾರವನ್ನು ಮಂಡ್ಯಕ್ಕೆ ಕೊಟ್ಟಿದ್ದೀರಿ. ಬರೀ ಸುಮಲತಾ.. ಸುಮಲತಾ.. ಸುಮಲತಾ.. ಅಷ್ಟೇ ಆಯ್ತು. ಕನ್ನಡ ಮಾಧ್ಯಮದವರಿಗೆ ಮೇ 23ಕ್ಕೆ ತಕ್ಕ ಉತ್ತರ ಕೊಡುತ್ತೇನೆ. ಮಂಡ್ಯದ ಜನತೆ ಕೂಡಾ ನಿಮಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಮಾದ್ಯಮಗಳ ಮೇಲೆ ಗುಡುಗಿದರು. ರಾಜ್ಯದಲ್ಲಿ ಶಾಂತಿಯುತ ಮತದಾನವಾಗಿದೆ. ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ. ಈ ನಾಲ್ಕೂ ಕ್ಷೇತ್ರಗಳಲ್ಲಿ ಮೈತ್ರಿ ಗೆಲ್ಲುವ ವಿಶ್ವಾಸವಿದೆ. ಇನ್ನು ಉತ್ತರ ಕರ್ನಾಟಕದ ಕನಿಷ್ಟ 10 ಕ್ಷೇತ್ರದಲ್ಲಿ ಪ್ರಚಾರ ಮಾಡುವುದಾಗಿ ತಿಳಿಸಿದರು.