ಉಡುಪಿ, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮೂಡ್ಗಾಗಿ ಸಿಎಂ ಕುಮಾರಸ್ವಾಮಿ ಉಡುಪಿಗೆ ಆಗಮಿಸಿದ್ದಾರೆ. ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಉಡುಪಿಗೆ ಬಂದ ಸಿಎಂ ಕಾಪು ಮೂಳೂರಲ್ಲಿರುವ ಹೆಲ್ತ್ ರೆಸಾರ್ಟ್ಗೆ ಬಂದಿದ್ದಾರೆ. ಇಲ್ಲಿ ಪಂಚಕರ್ಮ ಚಿಕಿತ್ಸೆ, ಧ್ಯಾನದಲ್ಲಿ ಸಿಎಂ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. ಯೋಗ, ಆಯಿಲ್ ಥೆರಪಿ ವ್ಯವಸ್ಥೆ ಮಾಡಲಾಗಿದ್ದು, 2 ದಿನ ಫುಲ್ ರಿಲ್ಯಾಕ್ಸ್ ಮಾಡಲಿದ್ದಾರೆ. ಎಡೆಬಿಡದ ಪ್ರಚಾರದಿಂದ ಸುಸ್ತಾಗಿರುವ ಕುಮಾರಸ್ವಾಮಿ 2 ದಿನಗಳ ಕಾಲ ಚಿಕಿತ್ಸೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಕ್ಯಾಮರಾಗಳನ್ನು ಕಂಡು ಕೋಪಗೊಂಡ ಕುಮಾರಸ್ವಾಮಿ ಯಾರು ಇವರನ್ನ ಒಳಗೆ ಬಿಟ್ಟವರು? ಸ್ವಲ್ಪನೂ ಮ್ಯಾನರ್ಸ್ ಇಲ್ವೇನ್ರೀ ಇವರಿಗೆ? ಮಾಧ್ಯಮಗಳಿಗೆ ಮಾಹಿತಿ ಕೊಟ್ಟೋರ್ ಯಾರು? ಖಾಸಗಿ ಕಾರ್ಯಕ್ರಮ ಅಂತ ಗೊತ್ತಿಲ್ವಾ ನಿಮ್ಗೆ? ಅಂತಾ ಸಿಎಂ ಮಾಧ್ಯಮದವರ ಮೇಲೆ ಸಿಡಿಮಿಡಿಗೊಂಡರು. ಈ ವೇಳೆ ರೆಸಾರ್ಟ್ ಪ್ರವೇಶ ಶೂಟಿಂಗ್ ಮಾಡಿದ್ದಕ್ಕೆ ಮಾಧ್ಯಮದವರ ಮೇಲೆ ಕೋಪಗೊಂಡರು.