ಸಿಎಂ ಮೊದಲು ಬರಗಾಲ ಸಮಸ್ಯೆಯತ್ತ ಗಮನ ಹರಿಸಲಿ: ಬಿಎಸ್ ವೈ

ಸಿಎಂ ಮೊದಲು ಬರಗಾಲ ಸಮಸ್ಯೆಯತ್ತ ಗಮನ ಹರಿಸಲಿ: ಬಿಎಸ್ ವೈ

ಶಿವಮೊಗ್ಗ, ಜೂ. 27 : ರಾಜ್ಯದಲ್ಲಿ ದಿನೆ ದಿನೆ ಬರಗಾಲ ಹೆಚ್ಚುತ್ತಿದೆ, ಇದರಿಂದ ರೈತರು ಆತ್ಮಹತ್ತೆ ಮಾಡಿಕೋಳ್ಳುುತ್ತಿದ್ದಾರೆ. ಕುಮಾರಸ್ವಾಮಿಗಳೆ ಮೊದಲು ಬರಗಾಲದ ಕಡೆ ಗಮನ ಕೊಡಿ, ಗ್ರಾಮವಾಸ್ತವ್ಯಕ್ಕೆ ನಮ್ಮ ವಿರೋಧವಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಮೊದಲು ಅದರ ಕಡೆ ಗಮನ ಹರಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಮೊದಲು ಬರಗಾಲ ಸಮಸ್ಯೆಯತ್ತ ಗಮನಹರಿಸಲಿ, ನಂತರ ಗ್ರಾಮವಾಸ್ತವ್ಯ ಮಾಡಲಿ, ಸಿಎಂ ಚುನಾಯಿತ ಶಾಸಕರನ್ನು ಗೂಂಡಾ ಎಂದು ಕರೆಯುತ್ತಾರೆ. ಕುಮಾರಸ್ವಾಮಿ ಅವರ ಈ ವರ್ತನೆಯನ್ನು ನಾನು ಖಂಡಿಸುತ್ತೇನೆ. ಸಿಎಂ ಹಗುರವಾಗಿ ಮಾತನಾಡಿ ಗೊಂದಲ ಸೃಷ್ಟಿಸುತ್ತಾರೆ. ಸಿಎಂ ಆಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದುದು ಅವರ ಕರ್ತವ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos