ಸಿಎಂ ‌ದ್ವೇಷದ ರಾಜಕಾರಣ‌ ಮಾಡುತ್ತಿದ್ದಾರೆ: ಡಿಕೆಶಿ

ಸಿಎಂ ‌ದ್ವೇಷದ ರಾಜಕಾರಣ‌ ಮಾಡುತ್ತಿದ್ದಾರೆ: ಡಿಕೆಶಿ

ಬೆಂಗಳೂರ, ಅ. 31: ಕನಕಪುರದಲ್ಲಿ ವೈದ್ಯಕೀಯ ‌ಕಾಲೇಜು ಸ್ಥಾಪನೆ ಈ ಹಿಂದಿನ‌ ಸರ್ಕಾರದ ‌ತೀರ್ಮಾನವಾಗಿತ್ತು.  ಆದರೆ ಸಿಎಂ ಯಡಿಯೂರಪ್ಪ ‌ದ್ವೇಷದ ರಾಜಕಾರಣ‌ ಮಾಡುತ್ತಿದ್ದಾರೆ. ಅಧಿಕಾರ ಯಾರಿಗೂ‌ ಶಾಶ್ವತವಲ್ಲ. ಕನಕಪುರಕ್ಕೆ ಮೆಡಿಕಲ್‌ ಕಾಲೇಜು ನೀಡಲೇಬೇಕು. ಸಿಎಂ‌ ಜತೆ ನಾನು ಮಾತುಕತೆ‌ ಮಾಡುತ್ತೇನೆ. ಚಿಕ್ಕಬಳ್ಳಾಪುರ ಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿರುವುದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಕನಕಪುರಕ್ಕೆ ಮಂಜೂರಾಗಿರುವ  ಕಾಲೇಜು ಆರಂಭಿಸಲು ಅಡ್ಡಿಪಡಿಸಬಾರದು. ಈ ಬಗ್ಗೆ ಸಿಎಂಗೆ ಪತ್ರ ಬರೆಯುತ್ತೇನೆ.‌

ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದರು.‌ ಆದರೆ ಈಗ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಅಡ್ಡಿಪಡಿಸುವುದು ಸರಿಯಲ್ಲ.‌ ಬಜೆಟ್ ನಲ್ಲಿ ‌ಈ ಬಗ್ಗೆ ಘೋಷಣೆಯಾಗಿದೆ.‌ ಸಿಎಂ‌ ‌ಯಡಿಯೂರಪ್ಪ ಇದನ್ನು ಪರಿಗಣಿಸಬೇಕು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos