ಸಿಎಂ ಗ್ರಾಮ ವಾಸ್ತವ್ಯಗೆ ಶೋಧ ಕಾರ್ಯ

ಸಿಎಂ ಗ್ರಾಮ ವಾಸ್ತವ್ಯಗೆ ಶೋಧ ಕಾರ್ಯ

ಕಲಬುರಗಿ , ಜೂನ್.6, ನ್ಯೂಸ್ ಎಕ್ಸ್ ಪ್ರೆಸ್:   ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೂ.22ರಂದು ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದು, ಕುಗ್ರಾಮ ಆಯ್ಕೆಗೆ ಶೋಧ ಕಾರ್ಯ ನಡೆದಿದೆ. ಈ ಮೊದಲು ಅತನೂರು ಗ್ರಾಮವನ್ನು ಆಯ್ಕೆ ಮಾಡಲಾಗಿತ್ತು.

ಗ್ರಾಮಕ್ಕೆ ಎಲ್ಲ ರೀತಿಯ ಸೌಲಭ್ಯಗಳು ಇರುವುದರಿಂದ ಆ ಗ್ರಾಮದ ಬದಲಾಗಿ ಕುಗ್ರಾಮವನ್ನು ಆಯ್ಕೆ ಮಾಡಲು ಸಿಎಂ ಅವರು ಶಾಸಕ ಎಂ.ವೈ.ಪಾಟೀಲಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಗ್ರಾಮ ಆಯ್ಕೆಗೆ ವ್ಯಾಪಕ ಪರಿಶೀಲನೆ ನಡೆದಿದೆ. ಗುರುವಾರ ಶಾಸಕರು ಹಾಗೂ ಅಧಿಕಾರಿಗಳು ಸಭೆ ಸೇರಿ ಗ್ರಾಮ ಆಯ್ಕೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos