ಹೈದರಾಬಾದ್,ಜು.29: ಭಾನುವಾರ ನಿಧನರಾದ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ಶವಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸ್ಪೀಕರ್ ರಮೇಶ್ ಕುಮಾರ್ ಭಾಗವಹಿಸಿದರು.
ಶವಯಾತ್ರೆಯಲ್ಲಿ ಅಗಲಿದ ತಮ್ಮ ಗೆಳೆಯನಿಗೆ ಅವರಿಬ್ಬರು ಹೆಗಲು ಕೊಟ್ಟದ್ದು ವಿಶೇಷವಾಗಿತ್ತು. ರಮೇಶ್ ಕುಮಾರ್ ಮತ್ತು ಜೈಪಾಲ್ ರೆಡ್ಡಿ ಆತ್ಮೀಯ ಸ್ನೇಹಿತರಾಗಿದ್ದವರು.
4 ಬಾರಿ ಶಾಸಕ, 5 ಬಾರಿ ಸಂಸದ ಹಾಗೂ 2 ಬಾರಿ ರಾಜ್ಯಸಭಾ ಸದಸ್ಯರಾಗಿ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದ ಜೈಪಾಲ್ ರೆಡ್ಡಿ ಕಾಂಗ್ರೆಸ್ನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡವರಲ್ಲಿ ಒಬ್ಬರು.
ಹೈದರಾಬಾದ್ನ ಜ್ಯುಬಿಲಿ ಹಿಲ್ಸ್ ನಿವಾಸದಿಂದ ಆರಂಭವಾದ ಜೈಪಾಲ್ ರೆಡ್ಡಿ ಶವಯಾತ್ರೆ ಪಿ.ವಿ. ಘಾಟ್ವರೆಗೆ ಸಾಗಿತು. ಅಲ್ಲಿ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.