ಮೈಸೂರು, ಏ. 15, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆಯ ಮುಗಿದ ನಂತರ ನರೇಂದ್ರ ಮೋದಿ ಮನೆಗೆ ಹೋಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ಮೇಲೆ ಒಂದು ದಿನ ಜನರ ಸಮಸ್ಯೆ ಬಗ್ಗೆ ಮಾತನಾಡಿಲ್ಲ, ಅದೆಲ್ಲ ಬಿಟ್ಟು, ರಾಜಕೀಯ ಸನ್ಯಾಸತ್ವ, ಪರ್ಸಂಟೇಜ್ ಬಗ್ಗೆ ಮಾತನಾಡುತ್ತಾರೆ. ಚುನಾವಣೆಯಲ್ಲಿ ಆಯ್ಕೆ ಆಗುವುದು ಜನರ ಕೆಲಸ ಮಾಡಲು, ಆದರೆ ಮೋದಿ ಜನರ ಕೆಲಸ ಬಿಟ್ಟು ಬರಿ ಎಮೋಷನಲ್ ವಿಚಾರ ಮಾತನಾಡಿಕೊಂಡು ಕುಳಿತಿದಿದ್ದಾರೆ ಎಂದು ಕಿಡಿಕಾರಿದರು.