ಚುನಾವಣೆಯಿಂದ ಹಿಂದೆ ಸರಿದ ದೇವೇಗೌಡರು

ಚುನಾವಣೆಯಿಂದ ಹಿಂದೆ ಸರಿದ ದೇವೇಗೌಡರು

 

ಹಾಸನ, ಮಾ. 14, ನ್ಯೂಸ್ ಎಕ್ಸ್ ಪ್ರೆಸ್ : ರಾಜಕೀಯದಲ್ಲಿ  ತಮ್ಮದೆಯಾದ ಛಾಪು ಮೂಡಿಸಿರುವ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರು ಚುನಾವಣೆಯಿಂದ ಹಿಂದೆ ಸರಿಯುವ ಮೂಲಕ ; ಈ ಇಳಿ ವಯಸ್ಸಿನಲ್ಲಿ ತನ್ನ ಮೊಮ್ಮಗನಿಗಾಗಿ ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದಲ್ಲಿ 5 ಬಾರಿ ಪ್ರೀತಿಯಿಂದ ಆಯ್ಕೆ ಮಾಡಿ ಕಳುಹಿಸಿದ್ದ ಕ್ಷೇತ್ರದ ಜನತೆಗೆ ಈ ಬಾರಿ ನಿರಾಸೆಯನ್ನುಂಟು ಮಾಡಿದ್ದಾರೆ ಎನ್ನಬಹುದು .ರಾಜಕೀಯವನ್ನೆ ತನ್ನ ಉಸಿರಾಗಿಕೊಂಡು ಜೀವನದ ಪ್ರತಿ ಹೆಚ್ಚೆಯಲಿ ಅದರೊಂದಿಗೆ ಸಾಗಿ ಬಂದಿರುವ ಗೌಡರ ಇಂತಹ ನಡೆ ಹೊಸದೆನಲ್ಲ .

ಹಿಂದೆ ಇದೇ ಗೌಡರು ತಮ್ಮ ವಿಧಾನಸಭೆ ಕ್ಷೇತ್ರವಾದ ಹೊಳೆನರಸೀಪುರವನ್ನು ತನ್ನ ಹಿರಿಯ ಮಗನಾದ ಹೆಚ್.ಡಿ.ರೇವಣ್ಣ ಅವರಿಗೆ ದಾರೆಯರೆದರು. ಇಂದಿಗೂ ಆ ಒಂದು ಕ್ಷೇತ್ರ ಗೌಡರ ಕುಟುಂಬದ ಭದ್ರ ಕೋಟೆಯಾಗಿದೆ.

ಹಲವು ಚುನಾವಣೆಯಲ್ಲಿ ಯಾವುದೇ ಪಕ್ಷ ತನ್ನ ಎದುರಾಳಿಯಾದರು ಸಹ ಎದೆಗುಂದದೆ ತಮ್ಮ ರಾಜಕೀಯ ಚಾಣಾಕ್ಷತೆಯಿಂದ ಸ್ಪರ್ಧಿಸುವ ದೇವೇಗೌಡರ ರಾಜಕೀಯ ನಡೆಗೆ ರಾಜ್ಯದ ಹಲವು ನಾಯಕರು ನಿಬ್ಬೆರಗಾಗುತ್ತಾರೆ.

ರಾಜಕೀಯದಲ್ಲಿ ಇಂದು ತಮ್ಮ ಮಕ್ಕಳಿಗಾಗಿ ಕ್ಷೇತ್ರಗಳನ್ನು ತ್ಯಾಗ ಮಾಡುವ ಮೂಲಕ ಕಲಿಯುಗ ಧೃತರಾಷ್ಟ್ರರಂ ತೆ ಬಿಂಬಿತರಾಗಿದ್ದಾರೆ. ಇಂದು ಹಾಸನ ಲೋಕಸಭೆ ಕ್ಷೇತ್ರದಿಂದ ತಮ್ಮ ಮೊಮ್ಮಗನನ್ನು ಕಣಕ್ಕಿಳಿಸಿದ ದೇವೇಗೌಡರು ತಮ್ಮ ಕುಟುಂಬದ ಸಮೇತ ಮನೆ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.

ನೂರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ತಮ್ಮ ಗ್ರಾಮಸ್ಥರ ಸಮ್ಮುಖದಲ್ಲಿ ಭಾವುಕರಾಗಿ ಕಂಬನಿ ಮಿಡಿದಿದ್ದಾರೆ. ಕ್ಷೇತ್ರದ ಜನತೆಯ ಋಣಭಾರ ತಮ್ಮ ಮೇಲಿದ್ದು ಇದಕ್ಕೆ ತಾವು ಚಿರ ಋಣಿ; ಆದರೆ ಈ ಬಾರಿಯ ಹಾಸನ ಲೋಕಸಭಾ ಚುನಾವಣಾ ಅಖಾಡಕ್ಕೆ ತಾವು ಇಳಿಯದೆ ತಮ್ಮ ಮೊಮ್ಮಗನಿಗೆ ಅಶಿರ್ವದಿಸಿ ಎಂದು ಕೇಳಿ ಕೊಂಡಿರುವ ಗೌಡರು ಚುನಾವಣೆ ಕಣಕ್ಕೆ ಭಾವನಾತ್ಮಕ ವಿದಾಯ ಹೇಳಿದ್ದಾರೆ ಎನ್ನಬಹುದು.

ಫ್ರೆಶ್ ನ್ಯೂಸ್

Latest Posts

Featured Videos