ಚಿರತೆಯನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ

ಚಿರತೆಯನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ

ಹಾವೇರಿ, ಅ. 20 : ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಒಡೆರಾಯನಹಳ್ಳಿ ಗ್ರಾಮದ ಶಿವಾನಂದಪ್ಪ ಬಣಕಾರ ಎಂಬ ರೈತನ ರೇಷ್ಮೆ ಮನೆಗೆ ಚಿರತೆ ಪ್ರವೇಶ ಮಾಡಿತ್ತು. ಕರು ತಿನ್ನಲು ಬಂದು ರೇಷ್ಮೆ ಮನೆಯಲ್ಲಿ ಬಂಧಿಯಾಗಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದುಕೊಂಡಿದ್ದಾರೆ. ಚಿರತೆ ರೇಷ್ಮೆ ಮನೆ ಹೊಕ್ಕಿದ್ದನ್ನ ಗಮನಿಸಿದ್ದ ಸ್ಥಳೀಯ ರೈತರು ಹೊರಗಡೆಯಿಂದ ಬಾಗಿಲು ಹಾಕಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು..

ಫ್ರೆಶ್ ನ್ಯೂಸ್

Latest Posts

Featured Videos