ಬೆಂಗಳೂರು, ಜೂನ್.10, ನ್ಯೂಸ್ ಎಕ್ಸ್ ಪ್ರೆಸ್: ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಹಾಗೂ ಸಮರ್ಥನಂ ಟ್ರಸ್ಟ್ ವತಿಯಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶನಿವಾರ ಮೊದಲ ಅಂಧರ ಕ್ರಿಕೆಟ್ ವಾರ್ಷಿಕ ಪ್ರಶಸ್ತಿ ಸಮಾರಂಭ ಏರ್ಪಡಿಸಲಾಗಿತ್ತು.
ಕರ್ನಾಟಕದ ಸುನೀಲ್ ಆರ್ ಹಾಗೂ ವೀರೇಶ್ ಕ್ರಮವಾಗಿ ವರ್ಷದ ಕ್ರಿಕೆಟಿಗ (ಬಿ3) ಹಾಗೂ ಉದಯೋನ್ಮುಖ ಕ್ರಿಕೆಟಿಗ (ಬಿ1) ಪ್ರಶಸ್ತಿಗೆ ಭಾಜನರಾದರು. ವರ್ಷದ ಕ್ರಿಕೆಟಿಗ ಪ್ರಶಸ್ತಿಯಲ್ಲಿ ಬಿ ವಿಭಾಗದಿಂದ ಉತ್ತರ ಪ್ರದೇಶದ ಜೀಶಾನ್ ಹೈದರ್, ಬಿ2 ವಿಭಾಗದಿಂದ ಆಂಧ ಅಜಯ್ ಕುಮಾರ್ ರೆಡ್ಡಿ ಪ್ರಶಸ್ತಿ ಪಡೆದರು.