ಯಾದಗಿರಿ, ಡಿ. 12 : ಹೆತ್ತ ತಾಯಿಯನ್ನು ದೇವರು ಸಮಾನ. ಆದರೆ, ಕಟುಕ ಮಗನೊಬ್ಬ ಹೆತ್ತಮ್ಮಳನ್ನೆ ಬೀದಿಯಲ್ಲಿ ತಳ್ಳಿದ್ದಾನೆ. ಹೊನ್ಮಮ್ಮ ಎನ್ನುವ ವಯೋವೃದ್ದ ಮಹಿಳೆ ಕೊರೆಯುವ ಚಳಿಯಲ್ಲಿಯೇ ಕಣ್ಣೀರು ಹಾಕುತ್ತಾ ನೋವಿನ ಜೀವನ ಸಾಗಿಸುತ್ತಿದ್ದಾಳೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ, ಕೆಂಭಾವಿಯ ಶಿವಾಜಿನಗರದ ಹೊನ್ಮಮ್ಮಳನ್ನು ಆಕೆಯ ಮಗ ಸಿದ್ದಪ್ಪ ಎಪಿಎಂಸಿ ಆವರಣದಲ್ಲಿ ಬಿಟ್ಟು ಹೋಗಿದ್ದಾನೆ. ಕೆಂಭಾವಿಯ ಎಪಿಎಂಸಿಯಲ್ಲಿ ನಾಲ್ಕು ತಿಂಗಳಿನಿಂದ ಹೊನ್ನಮ್ಮ ಆಶ್ರಯ ಪಡೆದಿದ್ದಾಳೆ.