ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಹಬ್ಬ ಸಂಭ್ರಮ

ಮಕ್ಕಳ ದಿನಾಚರಣೆ ಹಾಗೂ ದೀಪಾವಳಿ ಹಬ್ಬ ಸಂಭ್ರಮ

ಕೋಲಾರ: ಪ್ರತಿವರ್ಷ ನವೆಂಬರ್ ಬಂತೆಂದರೆ ಸಾಕು ಶಾಲೆಗಳಲ್ಲಿ ಮಕ್ಕಳ ದಿನಾಚಾರಣೆಯ ಸಿದ್ಧತೆಗಳು, ಅದರ ವಿಶೇಷತೆಗಳೇ ಜಾಸ್ತಿ. ಅದು ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುತ್ತಿತ್ತು. ಆದರೆ ಈ ವರ್ಷ ಕರೋನದಿಂದ ದಿನ ಶಾಲೆಗಳು ಇಲ್ಲದೆ ಇರುವುದರಿಂದ ಮಕ್ಕಳ ದಿನಾಚರಣೆಯ ಸಂಭ್ರಮ ಕಳೆಗುಂದಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಕುಮಾರ್ ಅಭಪ್ರಾಯಪಟ್ಟರು.
ಸ್ವರ್ಣಭೂಮಿ ಫೌಂಡೇಷನ್ ವತಿಯಿಂದ ನಲ್ಲೂರಮ್ಮ ದೇವಿ ಮಕ್ಕಳ ಆಶ್ರಮದಲ್ಲಿ ಮಕ್ಕಳಿಗೆ ಹೊಸ ಬಟ್ಟೆ ಹಾಗೂ ಸಿಹಿ ನೀಡಿ, ದೀಪಗಳನ್ನು ಬೆಳಗಿಸಿ ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ರವರ ಜನ್ಮದಿನದ ವಿಶೇಷವಾಗಿ “ಮಕ್ಕಳ ದಿನಾಚರಣೆ ಮತ್ತು ದೀಪಾವಳಿ ಹಬ್ಬವನ್ನು” ಸಂಭ್ರಮದಿಂದ ಆಚರಿಸಲಾಯಿತು.
ಈ ವರ್ಷ ಅನಾಥ ಆಶ್ರಮದಲ್ಲೇ ಇರುವ ಮಕ್ಕಳೊಂದಿಗೆ ಆಚರಿಸಲಾಗುತ್ತಿದೆ. ಇಡೀ ಆಶ್ರಮದ ಮಕ್ಕಳೆಲ್ಲರು ನಮ್ಮ ಶ್ರೀ ರಮಣ ಮಹರ್ಷಿ ಶಾಲೆಯಲ್ಲೇ ಉಚಿತ ಶಿಕ್ಷಣ ಪಡೆಯುತ್ತಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುತ್ತೇವೆ ಎಂದರು.
ಸಂಸ್ಥೆಯ ಸದಸ್ಯ ವಿನಿಲ್ ಮಾತನಾಡಿ ಎಲ್ಲರಂತೆ ಈ ಮಕ್ಕಳು ದೀಪಾವಳಿ ಹಬ್ಬವನ್ನು ಹೊಸಬಟ್ಟೆ ಹಾಕಿಕೊಂಡು ಸಂಭ್ರಮಿಸಬೇಕು ಎಂಬ ಧ್ಯೇಯದೊಂದಿಗೆ ಈ ವರ್ಷ ಅನಾಥ ಮಕ್ಕಳ ವಸತಿ ಶಾಲೆಯಲ್ಲಿ ಹಬ್ಬವನ್ನು ಆಚರಿಸಲಾಯಿತು. ಇದು ನಮಗೆ ಬಹಳ ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯ ದರ್ಶನ್ ಕನ್ನಡಿಗ, ಸವಿನಯ, ಅನಿಲ್, ಪ್ರಕಾಶ್ ಹಾಗೂ ಆಶ್ರಮದ ನಿರ್ವಾಹಕರಾದ ಭುವನೇಶ್ವರ್, ಉಮಾ ಮುಂತಾದವರು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos