ಚಿಕ್ಕಮಗಳೂರು, ಮಾ, 26, ನ್ಯೂಸ್ ಎಕ್ಸ್ ಪ್ರೆಸ್: ಜಿಲ್ಲೆಯ ಕಳಸ ತಾಲೂಕಿನಲ್ಲಿ ಶಂಕಿತ ಭಯೋತ್ಪಾದಕನನ್ನು ಕಳಸ ಪೊಲೀಸರು ಬಂಧಿಸಿದ್ದಾರೆ.
ಶಂಕಿತ ಉಗ್ರನ ಬಳಿ ಸ್ಪೋಟಕ ವಸ್ತುಗಳು ಪತ್ತೆಯಾಗಿದ್ದು, ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಬಂಧಿತ ವ್ಯಕ್ತಿ ಶಂಕಿತ ಭಯೋತ್ಪದಕನೋ ಅಥವಾ ನಕ್ಸಲನೋ ಎಂಬುದು ವಿಚಾರಣೆಯಿಂದ ಇನ್ನೂ ತಿಳಿಯಬೇಕಿದೆ. ಬಂಧಿತ ಶಂಕಿತ ಭಯೋತ್ಪಾದಕನ ಬಳಿ ಪೆಟ್ರೋಲ್ ಬಾಂಬ್, 40 ಜಿಲೆಟಿನ್ ಕಡ್ಡಿ, 40 ಡಿಟೋನೇಟರ್ಸ್ ಪತ್ತೆಯಾಗಿದೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ದೌಡಾಯಿಸಿದ್ದು, ಶಂಕಿತ ಭಯೋತ್ಪಾದಕರನ್ನು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.