ಚಿಕ್ಕಮಗಳೂರು, ಆ. 11 : ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ವರುಣ ಆರ್ಭಟ ಮುಂದುವರೆದಿದ್ದು, ಸಿರಿವಾಸೆ ಸಮೀಪದ ಅಡಲುಗದ್ದೆ ಗ್ರಾಮದಲ್ಲಿ ಬೃಹತ್ ಗುಡ್ಡ ಮನೆ ಹಾಗೂ ತೋಟದ ಮೇಲೆ ಕುಸಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ನಿತೀಶ್ ಹಾಗೂ ನಂದೀಶ್ ಎಂಬುವವರಿಗೆ ಸೇರಿದ ಮನೆ ಹಾಗೂ 4 ಎಕರೆ ಕಾಫಿ ತೋಟ ಮಣ್ಣಿನಲ್ಲಿ ಕೊಚ್ಚಿ ಹೋಗಿದೆ. ಹೀಗಾಗಿ ಗ್ರಾಮಸ್ಥರು ರಾತ್ರೋರಾತ್ರಿ ಗ್ರಾಮ ತೊರೆದು ಸಿರಿವಾಸೆ ಗ್ರಾಮದಲ್ಲಿ ಆಶ್ರಯ ಪಡೆಡಿದ್ದಾರೆ ಎಂದು ತಿಳಿದುಬಂದಿದೆ.