ನಿವೇಶನ ಕೊಡಿಸುವುದಾಗಿ ವಂಚನೆ: ಜೆಡಿಎಸ್​ ಮುಖಂಡರಿಬ್ಬರ ಬಂಧನ

ನಿವೇಶನ ಕೊಡಿಸುವುದಾಗಿ ವಂಚನೆ: ಜೆಡಿಎಸ್​ ಮುಖಂಡರಿಬ್ಬರ ಬಂಧನ

ಬೆಂಗಳೂರು, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಮತ್ತು ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ಹೆಸರು ಬಳಸಿಕೊಂಡು, ನಿವೇಶನ ಕೊಡಿಸುವುದಾಗಿ ಹೇಳಿ ಜೆಡಿಎಸ್​ ಮುಖಂಡರಿಬ್ಬರು 2 ಕೋಟಿ ರೂ. ವಂಚಿಸಿದ್ದಾರೆಂದು ಆರೋಪಿಸಲಾಗಿದೆ. ಜೆಡಿಎಸ್​ ಮುಖಂಡರಾದ ಸತೀಶ್​ ಗೌಡ ಮತ್ತು ಸುರೇಶ್​ ವಂಚನೆ ಆರೋಪಿಗಳು. ಸುಬ್ರಮಣ್ಯನಗರ ಜೆಡಿಎಸ್​ನ ಮುಖಂಡನಾಗಿರುವ ಸತೀಶ್​ ಗೌಡ, 5 ಲಕ್ಷ ರೂ.ಗೆ 30/40 ಚದರಡಿ ನಿವೇಶನ ಕೊಡುವುದಾಗಿ ನಂಬಿಸಿದ್ದ ಎನ್ನಲಾಗಿದೆ. ಈ ಮಾತನ್ನು ನಂಬಿದ 100ಕ್ಕೂ ಹೆಚ್ಚು ಜನರು ಸತೀಶ್​ ಗೌಡನಿಗೆ 5 ಲಕ್ಷ ರೂ. ಕೊಟ್ಟಿದ್ದರು ಎಂದು ಹೇಳಲಾಗಿದೆ. ಹಣ ಪಡೆದ ಸತೀಶ್​ಗೌಡ ಮತ್ತಿತರರು ಲಗ್ಗರೆ, ವಿಜಯನಗರ, ನಾಗರಬಾವಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ದಾಖಲಿ ಸೃಷ್ಟಿಸಿ ನಿವೇಶನಗಳನ್ನು ನೋಂದಣಿ ಮಾಡಿಸಿಕೊಟ್ಟಿದ್ದರು. ನಿವೇಶನ ಖರೀದಿಸಿದವರು ತಮ್ಮ ನಿವೇಶನಗಳ ಪಾಣಿ ತೆಗೆದುಕೊಳ್ಳಲು ಹೋದಾಗ, ಮೋಸ ಹೋಗಿರುವುದು ಖಚಿತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನೊಂದವರು ಸುಬ್ರಹ್ಮಣ್ಯನಗರ ಮತ್ತು ಮಹಾಲಕ್ಷ್ಮೀ ಲೇಔಟ್​ ಪೊಲೀಸ್​ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos