ಶಿವಮೊಗ್ಗ, ಮೇ. 22, ನ್ಯೂಸ್ ಎಕ್ಸ್ ಪ್ರೆಸ್: ಸ್ವಾತಂತ್ರ ನಂತರ ʼಮೊದಲ ಭಯೋತ್ಪಾದಕ ಒಬ್ಬ ಹಿಂದೂʼ ಎಂದು ನಟ, ರಾಜಕಾರಣಿ ಕಮಲಹಾಸನ್ ಹೇಳಿಕೆ ನೀಡಿದ್ರು. ಇದೀಗ ಕಮಲ ಹಾಸನ್ ಹೇಳಿಕೆಯ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಶಿವಮೊಗ್ಗದಲ್ಲಿ ಕಮಲ್ ಹಾಸನ್ ಬೆಂಬಲಿಸಿ ಸಾಮಾಜಿಕ ಕಾರ್ಯಕರ್ತ ಟಿ.ಆರ್ ಕೃಷ್ಣಪ್ಪ ಮಾಧ್ಯಮಗೋಷ್ಠಿ ನಡೆಸಿ ಕಮಲಹಾಸನ್ ಹೇಳಿಕೆ ಸಮರ್ಥಿಸಿಕೊಂಡರು. ಕಮಲ ಹಾಸನ್ ಮೇಲೆ ಚಪ್ಪಲಿ ಹಾಗೂ ಟೊಮ್ಯಾಟೊ ಎಸೆದಿರೋದನ್ನು ಖಂಡಿಸುತ್ತಾ ಕೃಷ್ಣಪ್ಪ ಭಾವೋಧ್ವೇಗಕ್ಕೊಳಗಾದ್ರು. ತಮ್ಮ ಚಪ್ಪಲಿಯಲ್ಲಿ ತಾವೇ ಹೊಡೆದುಕೊಂಡು ಆಕ್ರೋಶ ಹೊರಹಾಕಿದ್ರು.
ಕಮಲ ಹಾಸನ್ ಅವರು ಮೇಲೆ ಚಪ್ಪಲಿ ತೂರಾಟ ನಡೆಸಿದ್ದರಿಂದ ವಿಚಲಿತರಾಗಬೇಕಿಲ್ಲ. ಚಪ್ಪಲಿ ಇರುವುದು ನಮ್ಮ ರಕ್ಷಣೆಗಾಗಿ ಎಂದು ಕಮಲ ಹಾಸನ್ ವಿರೋಧಿಗಳಿಗೆ ಸವಾಲು ಹಾಕಿದ್ರು. ಕಮಲ ಹಾಸನ್ ಕೂಡಾ ತಮ್ಮ ಮೇಲೆ ಚಪ್ಪಲಿ ಎಸೆದವರಿಗೆ ಇನ್ನೊಂದು ಚಪ್ಪಲಿಯನ್ನು ಎದುರು ನೋಡುತ್ತಿರೋದಾಗಿ ಹೇಳಿಕೆ ನೀಡಿದ್ರು.