‘ಚಂದ್ರಬಾಬು ನಾಯ್ಡುಗೆ ಶಿಕ್ಷೆ ದೇವರೆ ನೀಡಿದ’ – ಜಗನ್ ರೆಡ್ಡಿ

‘ಚಂದ್ರಬಾಬು ನಾಯ್ಡುಗೆ ಶಿಕ್ಷೆ ದೇವರೆ ನೀಡಿದ’ – ಜಗನ್ ರೆಡ್ಡಿ

ಅಮರಾವತಿಮೇ. 25, ನ್ಯೂಸ್ಎಕ್ಸ್ ಪ್ರೆಸ್‍: ತೆಲುಗು ದೇಶಂ ಮುಖ್ಯಸ್ಥ ಎನ್ . ಚಂದ್ರಬಾಬು ನಾಯ್ಡು ಅವರ ತಪ್ಪುಗಳಿಗೆ ದೇವರೆ ಶಿಕ್ಷೆ ಕೊಟ್ಟಿದ್ದಾನೆ ಎಂದು ಆಂಧ್ರಪ್ರದೇಶ ಮುಂದಿನ ಮುಖ್ಯಮಂತ್ರಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ನೂತನ ಚುನಾಯಿತ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಜಗನ್ ರೆಡ್ಡಿ, ಅನ್ಯಾಯಯುತ, ಅನೈತಿಕವಾಗಿ ರಾಜಕೀಯ ಮಾಡುತ್ತಿದ್ದವರಿಗೆ ದೇವರೆ ಶಿಕ್ಷೆ ನೀಡಿರುವುದು  ಆಂಧ್ರಪ್ರದೇಶ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದರು.

2014ರ ಚುನಾವಣೆ ಸಂದರ್ಭದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ 23 ಶಾಸಕರನ್ನು ಚಂದ್ರಬಾಬು ನಾಯ್ಡು ಖರೀದಿಸಿದ್ದರು. ಆದರೆ, ಈಗ ಟಿಡಿಪಿ ಕೇವಲ 23 ಸ್ಥಾನಗಳನ್ನು ಪಡೆದುಕೊಂಡಿದೆ. ಅದು ಮೇ 23 ರಂದೇ ಫಲಿತಾಂಶ ಬಂದಿದೆ. 23ರಲ್ಲಿ ದೇವರು ಸುಂದರ ಲೇಖನ ಬರೆದಿದ್ದಾನೆ ಎಂದು ಜಗನ್

ಮತ ಹಂಚಿಕೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಶೇ, 50 ರಷ್ಟು ಮತಗಳನ್ನು ಪಡೆದಿದ್ದು, ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದ್ದು, ಉತ್ತಮ ಆಡಳಿತ ನೀಡುವುದಾಗಿ ಜಗನ್ ಮೋಹನ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos