ಮೈಸೂರು, ಅ. 23 : ಭಾರೀ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಾಮುಂಡಿಬೆಟ್ಟದಲ್ಲಿರುವ ದೊಡ್ಡನಂದಿ ರಸ್ತೆಯಲ್ಲಿ ಭೂ ಕುಸಿತವಾಗಿ ರಸ್ತೆಬದಿ ಅಳವಡಿಸಿದ್ದ ತಡೆಗೋಡೆ ಉರುಳಿಬಿದ್ದಿದೆ.
ಇಂದು ಬೆಳಗ್ಗೆ ಅಧಿಕಾರಿಗಳು ಬೆಟ್ಟಕ್ಕೆ ತೆರಳಿ ತಡೆಗೋಡೆ ರಿಪೇರಿ ಮಾಡಿಸಲು ಹಾಗೂ ಭೂ ಕುಸಿತ ಸರಿಪಡಿಸಲು ಕ್ರಮ ತೆಗೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಂದಿಗೆ ತೆರಳುವ ಮಾರ್ಗದಲ್ಲಿ ಸಾರ್ವಜನಿಕರು ಹಾಗೂ ವಾಹನಗಳನ್ನು ನಿಷೇಧಿಸಲಾಗಿದೆ. ಹಾಗಾಗಿ ಇಂದು ಪ್ರವಾಸಿಗರಿಗೆ ನಂದಿ ದರ್ಶನಕ್ಕೆ ಅವಕಾಶ ಸಿಗಲಿಲ್ಲ.