ಚಿಕ್ಕೋಡಿ, ಜ. 9 : ಮೂಢನಂಬಿಕೆ ವಿರುದ್ಧ ಸಮರ ಸಾರಿರುವ ಚಿಕ್ಕೋಡಿಯ ದಂಪತಿ ಸ್ಮಶಾನದಲ್ಲಿ ತಮ್ಮ ಮಗುವಿನ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ನಿವಾಸಿಗಳಾದ ಮಹೇಶ್ ಶಿಂಗೆ ದಂಪತಿ ಒಂದು ವರ್ಷದ ಮಗಳ ಹುಟ್ಟುಹಬ್ಬವನ್ನು ಸ್ಮಶಾನ ಭೂಮಿಯಲ್ಲಿ ಆಚರಿಸಿದ್ದಾರೆ.
ಇಂಗಳಿ ಗ್ರಾಮದ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತ ಮಹೇಶ ಶಿಂಗೆ ದಂಪತಿ ಮಗಳ ಕೈಯಲ್ಲಿ ಸ್ಮಶಾನದಲ್ಲೇ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ.