ಬೆಂಗಳೂರು, ಸೆ. 27 : ಅಲೋಕ ಕುಮಾರ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಪ್ರಮುಖ ಪಕ್ಷಗಳ ಜೊತೆ ಒಡನಾಟ ಹಿನ್ನಲೆ ಸಚಿವರು, ಶಾಸಕರ, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗಿತ್ತು ಎಂದು ಬಾಯ್ಬಿಟ್ಟಿದ್ದಾರೆ.
ಟೆಲಿಫೋನ್ ಕದ್ದಾಲಿಕೆ ನಡೆಸಿದ್ದಾಗಿ ಕೆಎಸ್ಆರ್ಪಿ ಎಡಿಜಿಪಿ ಅಲೋಕ್ಕುಮಾರ್ ಸಿಬಿಐ ತನಿಖಾ ತಂಡ ಅಲೋಕ್ಕುಮಾರ್ ಅವರನ್ನು ಇನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಒಂದು ವೇಳೆ ಅವರನ್ನು ವಶಕ್ಕೆ ಪಡೆದರೆ ಯಾವುದೇ ಕ್ಷಣದಲ್ಲಿ ಸೇವೆಯಿಂದ ಅಮಾನತ್ತಾಗುವ ಸಾಧ್ಯತೆ ಇದೆ. ಮೊದಲು ರೌಡಿಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದ್ದೆವು.