ಕ್ಯಾರೆಟ್ ಚಿನ್ನ ಅಲ್ಲ, ಆಭರಣ ಚಿನ್ನ

ಕ್ಯಾರೆಟ್ ಚಿನ್ನ ಅಲ್ಲ, ಆಭರಣ ಚಿನ್ನ

ತಿಪಟೂರು:ನಾನು ಯಾವತ್ತೂ ಕೂಡ ಸಜ್ಜನಿಕೆಯ ರಾಜಕಾರಣಿಯಲ್ಲ ಬದಲಾಗಿ ಎಲ್ಲ ಚಿತ್ರದಲ್ಲಿಯೂ ಇರುವಂತಹ ವ್ಯಕ್ತಿಯಾಗಿದ್ದು ನಾನು ೨೪ ಕ್ಯಾರೆಟ್ ಚಿನ್ನವಾಗಲು ಸಾಧ್ಯವಿಲ್ಲ ನಾನೊಬ್ಬ ಆಭರಣ ಚಿನ್ನ ಅಷ್ಟೆ ಎಂದು ಸಿ ಟಿ ರವಿ ತಿಳಿಸಿದರು.  ರಾಜ್ಯ ಪ್ರವಾಸೋದ್ಯಮ ಇಲಾಖೆಯು ಪಶು ಸಂಗೋಪನಾ ಇಲಾಖೆ ಇದರ ಸಹಯೋಗದಲ್ಲಿ ಜಂಟಿಯಾಗಿ ಅಗ್ರಿ ಟೂರಿಸಂನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದರು.  ಆರು ತಿಂಗಳಿನಿಂದ ಪ್ರವಾಸೋದ್ಯಮ ಇಲಾಖೆಯೂ ತೀರಾ  ಸಂಕಷ್ಟದಲ್ಲಿದ್ದು ಅದು ಇನ್ನೂ ಆರು ತಿಂಗಳಲ್ಲಿ ಸರಿದಾರಿಗೆ ಬಂದಲ್ಲಿ ತಾಲ್ಲೂಕಿಗೆ ಇನ್ನಷ್ಟು ಹಣವನ್ನು ಮಂಜೂರು ಮಾಡಲಾಗುವುದು ಎಂದು ಇದೇ ವೇಳೆ ಅವರು ಭರವಸೆ ನೀಡಿದರು.   ತಾಲ್ಲೂಕಿನ ಶ್ರೀ ಹತ್ಯಾಳು ನರಸಿಂಹಸ್ವಾಮಿ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಅಭಿವೃದ್ಧಿಪಡಿಸುತ್ತಿದ್ದು ಅದರ ಮುಂದಿನ ಭಾಗವಾಗಿ ತಿಪಟೂರಿನ ಹೃದಯ ಭಾಗದಲ್ಲಿ ಖ್ಯಾತ ಹಾಸ್ಯ ನಟ ದಿವಂಗತ ನರಸಿಂಹರಾಜು ಅವರ ಸವಿನೆನಪಿಗಾಗಿ  ಕಲಾಭವನವನ್ನು ಪ್ರಾರಂಭಿಸಲಾಗುತ್ತಿದ್ದು ಅದಕ್ಕೆ ಈಗಾಗಲೇ ಸುಮಾರು ನಾಲ್ಕು ಕೋಟಿ ಅನುದಾನವನ್ನು ನೀಡಲಾಗಿದೆ ಅವಶ್ಯವಿದ್ದಲ್ಲಿ ಮುಂದೆಯೂ ಕೂಡ ಅದಕ್ಕೆ ಅನುದಾನ ನೀಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos