ಫೆ.1ಕ್ಕೆ ನಿಗದಿಯಾಗಿದ್ದ ಬೆಳ್ಳಿಹಬ್ಬದ ಸಮಾರೋಪ ರದ್ದು: ಕುಲಪತಿ ಘಂಟಿ

ಫೆ.1ಕ್ಕೆ ನಿಗದಿಯಾಗಿದ್ದ ಬೆಳ್ಳಿಹಬ್ಬದ ಸಮಾರೋಪ ರದ್ದು: ಕುಲಪತಿ ಘಂಟಿ

ಬಳ್ಳಾರಿ: ಜನವರಿ 31ರಂದು ಹಮ್ಮಿಕೊಂಡಿದ್ದ ಕವಿ ಕಾವ್ಯ ಸಂಭ್ರಮ, ಫೆಬ್ರವರಿ 1ಕ್ಕೆ ನಿಗದಿಯಾಗಿದ್ದ ಬೆಳ್ಳಿಹಬ್ಬದ ಸಮಾರೋಪ ರದ್ದುಪಡಿಸಲಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲಿಕಾ ಎಸ್‌. ಘಂಟಿ ತಿಳಿಸಿದ್ದಾರೆ.

ಜ.30ಕ್ಕೆ ಘಟಿಕೋತ್ಸವ ನಡೆಯಲಿದ್ದು, ಇಬ್ಬರಿಗೆ ಡಿ.ಲಿಟ್., 87 ಪಿಎಚ್.ಡಿ., 26 ಮಂದಿಗೆ ಎಂ.ಫಿಲ್ ಸೇರಿದಂತೆ ವಿವಿಧ ಕೋರ್ಸ್ ಮುಗಿಸಿರುವ ಒಟ್ಟು 645 ಜನರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು.

ವಿಜ್ಞಾನಿ ಎ.ಎಸ್.ಕಿರಣ ಕುಮಾರ ನುಡಿಹಬ್ಬ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪದವಿ ಪ್ರದಾನ ಮಾಡಲಿದ್ದಾರೆ. ರಾಜ್ಯಪಾಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕುಲಪತಿ ಪ್ರೊ.ಮಲ್ಲಿಕಾ ಎಸ್‌. ಘಂಟಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos