ಆಸ್ಪತ್ರೆ ಸೇರಿದವ ಹೆಣವಾಗಿ ಬಂದ

ಆಸ್ಪತ್ರೆ ಸೇರಿದವ ಹೆಣವಾಗಿ ಬಂದ

ಮೈಸೂರು, ಡಿ. 12: ಕೊಪ್ಪ ಗ್ರಾಮದ ಮಹದೇವ ಡಿಸೆಂಬರ್ 6ರಂದು ಕಂಠಪೂರ್ತಿ ಕುಡಿದು ಎಣ್ಣೆ ಹೊಡೆದ ಮಹದೇವ ಅವರಿಗೆ ಬಾಯಿ ಚಪ್ಪರಿಸುವುದಕ್ಕೆ ಏನಾದರೂ ಬೇಕು ಅನಿಸಿತ್ತು. ಹೀಗಾಗಿ ಬಾರ್ ಎದುರಿಗಿದ್ದ ಕ್ಯಾಂಟಿನ್‍ಗೆ ಹೋಗಿ ಮೆಣಸಿನಕಾಯಿ ಬಜ್ಜಿ ಕೇಳಿದ್ದಾರೆ. ಹಣ ಇಲ್ಲದೆ ಮೆಣಸಿನಕಾಯಿ ಬಜ್ಜಿ ಕೊಡುವುದಿಲ್ಲ ಅಂತ ಅಂಗಡಿ ಮಾಲೀಕರು ಹೇಳಿದ್ದಕ್ಕೆ ಜಗಳಮಾಡಿಕೊಂಡಿದ್ದರು.

ಮಹದೇವ ಜಗಳ ಆರಂಭಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಇಬ್ಬರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಜ್ಜಿ ಅಂಗಡಿಯ ಮಹಿಳೆಯ ಸ್ಟೀಲ್ ಜಗ್‍ನಿಂದ ಮಹದೇವಗೆ ಹೊಡೆದರೆ, ಉಳಿದ ಕೆಲವರು ಎದೆಗೆ ಗುದ್ದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಂತೋಷ್ ಮತ್ತು ಶಿವಕುಮಾರ್ ಪಕ್ಕಕ್ಕೆ ಎಳೆದೊಯ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮಹದೇವ ಅವರನ್ನು ಆಟೋದಲ್ಲಿ ಮನೆಗೆ ಕಳಿಸಿದ್ದಾರೆ. ತಕ್ಷಣವೇ ಕುಟುಂಬಸ್ಥರು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹದೇವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬೈಲುಕುಪ್ಪೆ ಪೊಲೀಸರು ಆರೋಪಿಗಳಾದ ಶಿವಕುಮಾರ್ ಮತ್ತು ಸಂತೋಷನನ್ನು ಬಂಧಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos