ಬೆಂಗಳೂರು, ಡಿ. 12: ಉಪಚುನಾವಣೆ ಫಲಿತಾಂಶ ಬಂದ ಕೂಡಲೇ ಸಿಎಂ ಸಂಪುಟ ವಿಸ್ತರಣೆಯಾಗಿ ತಾವೆಲ್ಲರೂ ಮಂತ್ರಿಗಳಾಗುತ್ತೇವೆಂದು ಎಣಿಸಿದ್ದ ಶಾಸಕರು ಇನ್ನೂ ಒಂದು ವಾರ ಕಾಯಬೇಕಾದ ಸ್ಥಿತಿ ಇದೆ. ಅಮಿತ್ ಶಾ ಅವರು ಈ ವಾರ ವಿವಿಧ ಕಾರ್ಯಗಳಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ಅವರ ಭೇಟಿಗೆ ಸದ್ಯಕ್ಕೆ ಅವಕಾಶ ಇಲ್ಲವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ವಿಚಾರವನ್ನು ನೂತನ ಶಾಸಕರಿಗೆ ತಿಳಿಸಿದ್ಧಾರೆ. ಮುಂದಿನ ವಾರ ಅವರು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಇನ್ನೂ 4-5 ದಿನ ನಾನು ದೆಹಲಿಗೆ ಹೋಗುವುದಿಲ್ಲ. ಅಮಿತ್ ಶಾ ಅವರು ಪ್ರಚಾರದಲ್ಲಿದ್ದಾರೆ. ಅವರು ಪ್ರಚಾರ ಮುಗಿಸಿ ವಾಪಸ್ ಬಂದ ನಂತರ ತಾನು ದೆಹಲಿಗೆ ಹೋಗಿ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುತ್ತೇನೆ ಎಂದು ಸಚಿವಾಕಾಂಕ್ಷಿ ನೂತನ ಶಾಸಕರಿಗೆ ಸಿಎಂ ಮನದಟ್ಟು ಮಾಡಿದ್ದಾರೆ.