ಮೈಸೂರು, ಏ. 10, ನ್ಯೂಸ್ ಎಕ್ಸ್ ಪ್ರೆಸ್: ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ತಂದೆ ಸಿಎಂ ಕುಮಾರಸ್ವಾಮಿ ಅಧಿಕೃತವಾಗಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ನಗರದ ಸಂತೆಮಾಳದಿಂದ ಪ್ರಚಾರ ಆರಂಭಿಸಿರುವ ಸಿಎಂಗೆ ಯುವ ಜೆಡಿಎಸ್ ಮುಖಂಡ ಕಾರ್ತಿಕ್ ಜೆಸಿಬಿ ಮೂಲಕ 370ಕೆಜಿ ತೂಕದ ಒಣದ್ರಾಕ್ಷಿ ಹಾರ ಹಾಕಿ ಸಂಭ್ರಮಿಸಿದ್ದಾರೆ.
ಮೂಲತಃ ಹೊಸ ಉಂಡವಾಡಿ ಗ್ರಾಮದವರಾಗಿರುವ ಕಾರ್ತಿಕ್, ಹಾರಕ್ಕಾಗಿ ಸುಮಾರು ಒಂದೂವರೆ ಲಕ್ಷ ರೂ ಖರ್ಚು ಮಾಡಿದ್ದಾರೆ. ಇಂದು ಕೆ.ಆರ್.ಎಸ್ ಸಂತೆಮಾಳದಲ್ಲಿ ಇಂದು ಸಿಎಂಗೆ ಹಾರ ಹಾಕುವ ಮೂಲಕ ಕಾರ್ತಿಕ್ ಸಂಭ್ರಮಿಸಿದರು. ಇನ್ನು ಕ್ಯಾಂಪೇನ್ ವೇಳೆ ಅಪಾರ ಜನಸ್ತೋಮ ನೆರೆದಿದ್ದು, ಸಿಎಂ ಹಾಗೂ ನಿಖಿಲ್ ಪರ ಘೋಷಣೆಗಳು ಮೊಳಗಿದವು.