ಯಾದಗಿರಿ, ಫೆ.27, ನ್ಯೂಸ್ ಎಕ್ಸ್ ಪ್ರೆಸ್:
ಭಾರತೀಯ
ಸೇನೆಯ ಏರ್ ಸರ್ಜಿಕಲ್ ಸ್ಟ್ರೈಕ್
ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣೆಯ ಈ ಸಂದರ್ಭದಲ್ಲಿ ಸೇನೆಯನ್ನು
ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ರಾಯಚೂರು ಸಂಸದ
ಬಿ.ವಿ. ನಾಯಕ್ ಹೇಳಿದ್ದಾರೆ.
ಕೆಡಿಪಿ
ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಳ್ಳಲು ಯಾದಗಿರಿಗೆ ಆಗಮಿಸಿದ ಕಾಂಗ್ರೆಸ್ ಸಂಸದ
ಬಿ.ವಿ. ನಾಯಕ್, ‘ಸರ್ಜಿಕಲ್
ಸ್ಟ್ರೈಕ್ ಹೊಸದಲ್ಲ. ದೇಶದ ಆಂತರಿಕ ರಕ್ಷಣೆ
ಸಂದರ್ಭದಲ್ಲಿ ಇಂತಹ ಪ್ರಕ್ರಿಯೆಗಳು ಸಹಜ.
ಈ ಹಿಂದೆಯೂ ಕೇಂದ್ರದಲ್ಲಿ
ಕಾಂಗ್ರೆಸ್ ಸರ್ಕಾರವಿದ್ದಾಗಲೂ ಇಂತಹ ದಾಳಿ ನಡೆಸಿತ್ತು,
ಆದರೆ ಪ್ರಚಾರ ಮಾಡಲಿಲ್ಲ ಎಂದು
ಹೇಳಿದ್ದಾರೆ.
ಆದರೆ ಪ್ರಧಾನಿ ಮೋದಿ ನೇತೃತ್ವದ
ಕೇಂದ್ರ ಸರ್ಕಾರ ರಾಜಕೀಯ ಲಾಭಕ್ಕೋಸ್ಕರ
ದಾಳಿಯ ಪ್ರಚಾರ ಪಡೆಯುತ್ತಿದೆ. ಚುನಾವಣೆಯ
ಈ ಸಂದರ್ಭದಲ್ಲಿ ಸೇನೆಯನ್ನು
ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ.