ಬಸ್ ನಿಲ್ಲಿಸದ ಚಾಲಕ ಅಮಾನತು

ಬಸ್ ನಿಲ್ಲಿಸದ ಚಾಲಕ ಅಮಾನತು

ಬೆಳಗಾವಿ, ಸೆ. 25 : ನಿಯಮಾವಳಿ 1972ರ ಪ್ರಕಾರ ಚಾಲಕನ ನಡತೆ ಅಶಿಸ್ತು ಮತ್ತು ದಂಡನಾರ್ಹವಾಗಿತ್ತು ಎಂದು ಪರಿಗಣಿಸಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಖಾನಾಪುರ ತಾಲೂಕಿನ ಬೇಕವಾಡ ಗ್ರಾಮದ ವಿದ್ಯಾರ್ಥಿಗಳು ಬಸ್ ನಿಲ್ಲಿಸಲು ಯತ್ನಿಸಿದಾಗ ಅವರ ಜೀವ ಲೆಕ್ಕಿಸದೆ ಬಸ್ ಮುನ್ನುಗ್ಗಿಸಿದ ಆರೋಪದ ಮೇಲೆ ಬಸ್ ಚಾಲಕನನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ದಾಂಡೇಲಿ -ಹಳಿಯಾಳ -ಬೆಳಗಾವಿ ಮಾರ್ಗದ (ವಾಹನ ಸಂಖ್ಯೆ ಕೆಎ 42 ಎಫ್ 1096) ಚಾಲಕ ಎಸ್ ಎಫ್ ಶೇಖ್ ಅವರನ್ನು ಅಮಾನತು ಮಾಡಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಧಾರವಾಡ ಗ್ರಾಮಾಂತರ ವಿಭಾಗ ಆದೇಶ ಹೊರಡಿಸಿದೆ.
ವಿದ್ಯಾರ್ಥಿಗಳು ಬಸ್ಸನ್ನು ನಿಲ್ಲಿಸುವಂತೆ ಸೂಚಿಸಿದ್ದರು ಲೆಕ್ಕಿಸದೆ ನಿರ್ಲಕ್ಷ್ಯತನ ಬಸ್ ಓಡಿಸಿಕೊಂಡು ಹೋಗಿದ್ದರು. ಆಗ ಓರ್ವ ವಿದ್ಯಾರ್ಥಿ ಅಪಾಯದಿಂದ ಪಾರಾಗಿದ್ದನು.

ಫ್ರೆಶ್ ನ್ಯೂಸ್

Latest Posts

Featured Videos