ಬಸ್ ಪಲ್ಟಿ: 3 ಸಾವು,20 ಜನರಿಗೆ ಗಾಯ

ಬಸ್ ಪಲ್ಟಿ: 3 ಸಾವು,20 ಜನರಿಗೆ ಗಾಯ

ಸಾಗರ, ಏ. 18, ನ್ಯೂಸ್ ಎಕ್ಸ್ ಪ್ರೆಸ್: ಖಾಸಗಿ ಬಸ್ ಸಾಗರ ತಾಲೂಕಿನ ಉಳ್ಳೂರು ಬಳಿ ನಿನ್ನೆ ತಡ ರಾತ್ರಿ ಪಲ್ಟಿ ಹೊಡೆದಿದೆ. ಬಸ್ ಪಲ್ಟಿಯಾದ ಪರಿಣಾಮ 20 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, 3 ಜನರು ಮೃತಪಟ್ಟಿದ್ದಾರೆ.

ಕೀರ್ತನಾ(12), ಸುಜಾತ (40 ವರ್ಷ), ಮಹಮದ್ ಯಾಸಿನ್ (16) ಮೃತಪಟ್ಟ ದುರ್ದೈವಿಗಳು. ಗಾಯಾಳುಗಳನ್ನು ಸಾಗರ ಉಪವಿಭಾಗೀಯ ಆಸ್ಪತ್ರೆ ಹಾಗೂ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಾಗರದ ಕರ್ನಾಟಕ ಸೋಶಿಯಲ್ ಮೂಮೆಂಟ್ ಸಂಘಟನೆ ಬಸ್ಸಿನೊಳಗೆ ಸಿಕ್ಕಿ ಹಾಕಿಕೊಂಡ ಎಲ್ಲರನ್ನು ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದು,

ಬಸ್ಸು ಪಲ್ಟಿಯಾಗಿದ್ದರಿಂದ ಮುಖ್ಯ ರಸ್ತೆ ಸಂಪೂರ್ಣ ಬಂದ್ ಆಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos