ಬಸ್ ಹರಿದು ಬಾಲಕ ಸಾವು

ಬಸ್ ಹರಿದು ಬಾಲಕ ಸಾವು

ಗದಗ, ಅ. 3 : ಕೆಎಸ್ ಆರ್ ಟಿಸಿ ಬಸ್ ಹರಿದು ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ನಗರದ ಭೀಷ್ಮಕೆರೆಯ ಬಿನ್ನಿಕಟ್ಟಿ ಬಳಿ ನಡೆದಿದೆ.
ಕಿಶನ್ (8) ಮೃತ ಬಾಲಕ. ರಸ್ತೆ ದಾಟುತ್ತಿದ್ದ ಬಾಲಕನ ಮೇಲೆ ಬಸ್ ಹರಿದು ಈ ದರ್ಘಟನೆ ಸಂಭವಿಸಿದೆ. ಬಾಲಕನ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಚಾಲಕನ ನಿಯಂತ್ರಣ ತಪ್ಪಿ ಬಾಲಕನ ಮೇಲೆ ಹರಿದ ಬಸ್, ಬಳಿಕ ಕಾರು ಹಾಗೂ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಘಟನೆ ಸಂಬಂಧ ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos