ಬಿಎಸ್ ವೈ ವಿರುದ್ಧ ಕತ್ತಿ ಕೆಂಡಾಮಂಡಲ

ಬಿಎಸ್ ವೈ ವಿರುದ್ಧ ಕತ್ತಿ ಕೆಂಡಾಮಂಡಲ

ಬೆಳಗಾವಿ(ಚಿಕ್ಕೋಡಿ), ಅ.18 : ಬಿಜೆಪಿ ಹಿರಿಯ ಶಾಸಕ ಉಮೇಶ ಕತ್ತಿ ಬಿಎಸ್ ವೈ ವಿರುದ್ಧ ಕತ್ತಿ ಬೀಸಿದ್ದಾರೆ. ನೆರೆಯ ಮಹಾರಾಷ್ಟ್ರಕ್ಕೆ ನೀರು ಹರಿಸುವ ಸಿಎಂ ಹೇಳಿಕೆಗೆ ಕೆಂಡಾಮಂಡಲರಾಗಿ ಮಾತನಾಡಿದ ಅವರು, ಮೊದಲು ಕೃಷ್ಣಾ ನದಿಯ ಬಿ ಸ್ಕೀಮ್, 740 ಟಿಎಂಸಿ ನೀರು ಬಳಕೆಗೆ ಯಡಿಯೂರಪ್ಪ ಯೋಚನೆ ಮಾಡಲಿ. ಮೊದಲು ನಮ್ಮ ರಾಜ್ಯಕ್ಕೆ ನೀರು ಬಳಕೆ ಮಾಡುವ ಬಗ್ಗೆ ವಿಚಾರ ಮಾಡಲಿ. ಮಹಾರಾಷ್ಟ್ರದ ಚುನಾವಣೆಯಲ್ಲಿ ಯಡಿಯೂರಪ್ಪ ಭಾಷಣೆ ಮಾಡುವುದು ಸರಿಯಲ್ಲ. ಮೊದಲು ಉತ್ತರ ಕರ್ನಾಟಕದ ನೀರಾವರಿ ಬಗ್ಗೆ ಯೋಚನೆ ಮಾಡಲಿ ಎಂದು ಕಿಡಿಕಾರಿದರು.
ಸಿಎಂ ಮಹದಾಯಿ ಬಗ್ಗೆ ಮಾತನಾಡುತ್ತಿಲ್ಲ. ನಾನು ಮತ್ತೆ ಉತ್ತರ ಕರ್ನಾಟಕದ ಬಗ್ಗೆ ಧ್ವನಿ ಎತ್ತುತ್ತೇನೆ. ಮಹದಾಯಿ, ಕೃಷ್ಣಾ ನದಿ ನೀರು ಬಳಕೆ ಬಗ್ಗೆ ಯೋಚಿಸಲಿ. ಈ ಬಗ್ಗೆ ಮೊದಲು ತೀರ್ಮಾನವಾಗಲಿ ಮುಂದೆ ಅವರು ಎಲ್ಲಿ ಬೇಕಿದ್ದಲ್ಲಿ ನೀರು ಹರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos