ಬೆಂಗಳೂರು, ಸೆ. ಅ. 4 : ನಿಮ್ಮ ಜಗಳದಲ್ಲಿ ರಾಜ್ಯವನ್ನು ಯಾಕೆ ಬಲಿಕೊಡ್ತೀರಾ? ನೆರೆ ಸಂತ್ರಸ್ಥರ ಪರಿಹಾರ ಕೊಡುವ ಯೋಗ್ಯತೆ ಕೇಂದ್ರಕ್ಕಿಲ್ಲ, ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವಿಟರ್ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಲೇವಡಿ ಮಾಡಿದ್ದಾರೆ.
ನ್ಯಾಯಬದ್ಧ ಪರಿಹಾರ ಕೇಳಿ ವರದಿ ಸಲ್ಲಿಸೋದು ಆಗಲ್ಲ, ಸಲ್ಲಿಸುವ ಯೋಗ್ಯತೆ ನಿಮಗೂ ಇಲ್ಲ, ಆರ್ಥಿವಾಗಿಯಷ್ಟೇ ನೀವು ದುರ್ಬಲರಾಗಿಲ್ಲ, ಬೌದ್ಧಿಕವಾಗಿಯೂ ನಿಮ್ಮ ಸರ್ಕಾರ ದಿವಾಳಿಯಾಗಿದೆ ಎಂದು ಸಿದ್ದರಾಮಯ್ಯ ಅವರು ಬಿಎಸ್ವೈ ಅವರ ಕಾಲೆಳೆದಿದ್ದಾರೆ.