ಕಾಂಗ್ರೆಸ್ ಪ್ರತಿಭಟನೆಗೆ ಬಿಎಸ್​ವೈ ತಿರುಗೇಟು

ಕಾಂಗ್ರೆಸ್ ಪ್ರತಿಭಟನೆಗೆ ಬಿಎಸ್​ವೈ ತಿರುಗೇಟು

ಬೆಂಗಳೂರು: ರಾಜ್ಯದಲ್ಲಿ ಬರಗಾಲ ಇರುವುದು ನಿಜ, ಇಂತಹ ಭೀಕರ ಬರಗಾಲ ಇದ್ದಾಗ ಸಹಜವಾಗಿ ಪರಿಹಾರ ಕೊಡುತ್ತಾರೆ. ಪರಿಹಾರ ಬರುವುದಕ್ಕೆ ಸ್ಪಲ್ಪ ವಿಳಂಬ ಆಗಬಹುದು ಅಷ್ಟೇ. ಪರಿಹಾರ ತರಲು ನಾವೂ ಪ್ರಯತ್ನ ಮಾಡುತ್ತೇವೆ ಎಂದು ಬಿಎಸ್​ವೈ ಹೇಳಿದರು.

ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಧವಳಗಿರಿಯಲ್ಲಿ ಮಾತನಾಡಿದ ಅವರು, ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದಕ್ಕೆ ವಾಗ್ದಾಳಿ ನಡೆಸಿದರು. ಆವತ್ತಿಂದಲೂ ಇವತ್ತಿನವರೆಗೂ ಕಾಂಗ್ರೆಸ್​ನವರು ಅದೇ ಮಾತಾಡುತ್ತಿದ್ದಾರೆ.

ಪರಿಹಾರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲ ರಾಜ್ಯಗಳಿಗೂ ನ್ಯಾಯಬದ್ಧವಾಗಿ ಪರಿಹಾರ ಕೊಡ್ತೇವೆ ಅಂತ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹ ಇದನ್ನೇ ಹೇಳಿದ್ದಾರೆ. ಕಾಂಗ್ರೆಸ್​ನವರು ಸ್ವಲ್ಪ ತಾಳ್ಮೆಯಿಂದ ಇದ್ದರೆ, ಹಣವೂ ಬಿಡುಗಡೆ ಆಗುತ್ತದೆ, ಕೆಲಸ ಸಹ ಮಾಡಬಹುದು ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos