ಬೆಂಗಳೂರು: ರಾಜ್ಯದಲ್ಲಿ ಬರಗಾಲ ಇರುವುದು ನಿಜ, ಇಂತಹ ಭೀಕರ ಬರಗಾಲ ಇದ್ದಾಗ ಸಹಜವಾಗಿ ಪರಿಹಾರ ಕೊಡುತ್ತಾರೆ. ಪರಿಹಾರ ಬರುವುದಕ್ಕೆ ಸ್ಪಲ್ಪ ವಿಳಂಬ ಆಗಬಹುದು ಅಷ್ಟೇ. ಪರಿಹಾರ ತರಲು ನಾವೂ ಪ್ರಯತ್ನ ಮಾಡುತ್ತೇವೆ ಎಂದು ಬಿಎಸ್ವೈ ಹೇಳಿದರು.
ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಧವಳಗಿರಿಯಲ್ಲಿ ಮಾತನಾಡಿದ ಅವರು, ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದಕ್ಕೆ ವಾಗ್ದಾಳಿ ನಡೆಸಿದರು. ಆವತ್ತಿಂದಲೂ ಇವತ್ತಿನವರೆಗೂ ಕಾಂಗ್ರೆಸ್ನವರು ಅದೇ ಮಾತಾಡುತ್ತಿದ್ದಾರೆ.
ಪರಿಹಾರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲ ರಾಜ್ಯಗಳಿಗೂ ನ್ಯಾಯಬದ್ಧವಾಗಿ ಪರಿಹಾರ ಕೊಡ್ತೇವೆ ಅಂತ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹ ಇದನ್ನೇ ಹೇಳಿದ್ದಾರೆ. ಕಾಂಗ್ರೆಸ್ನವರು ಸ್ವಲ್ಪ ತಾಳ್ಮೆಯಿಂದ ಇದ್ದರೆ, ಹಣವೂ ಬಿಡುಗಡೆ ಆಗುತ್ತದೆ, ಕೆಲಸ ಸಹ ಮಾಡಬಹುದು ಎಂದರು.