ಸೈನಿಕರು ಚೆಲ್ಲಿದ ರಕ್ತದ ಮೇಲೆ ಬಿಎಸ್ ವೈ ರಾಜಕೀಯ ಮಾಡುತ್ತಾರೆ: ದಿನೇಶ್ ಗುಂಡೂರಾವ್ ಆಕ್ರೋಶ

ಸೈನಿಕರು ಚೆಲ್ಲಿದ ರಕ್ತದ ಮೇಲೆ ಬಿಎಸ್ ವೈ ರಾಜಕೀಯ ಮಾಡುತ್ತಾರೆ: ದಿನೇಶ್ ಗುಂಡೂರಾವ್ ಆಕ್ರೋಶ

ಹುಬ್ಬಳ್ಳಿ, ಫೆ.28, ನ್ಯೂಸ್‍ ಎಕ್ಸ್ ಪ್ರೆಸ್: ಸೈನಿಕರು ಚೆಲ್ಲಿದ ರಕ್ತದ ಮೇಲೆ ಬಿ.ಎಸ್. ಯಡಿಯೂರಪ್ಪ ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ ವೈ ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು. ದೇಶದ ಮೇಲೆ ಉಗ್ರರ ದಾಳಿಯಾಗಿದೆ. ಅದನ್ನು ನಾವು ಖಂಡಿಸುತ್ತೇವೆ. ಅಲ್ಲದೇ ನಾವು ಕೇಂದ್ರ ಸರ್ಕಾರಕ್ಕೆ ಬೆಂಬಲ ನೀಡಿದ್ದೇವೆ. ಯೋಧರಿಗೆ ಬೆನ್ನಲುಬಾಗಿ ನಾವೆಲ್ಲಾ ನಿಲ್ಲಬೇಕು ಎಂದು ಹೇಳಿದರು.

ಈ ಹೋರಾಟದಲ್ಲಿ ನಾವೆಲ್ಲಾ ಒಂದಾಗಿ ಹೋರಾಟ ಮಾಡಬೇಕು. ಅದು ಬಿಟ್ಟು ರಾಜಕೀಯವಾಗಿ ಬಳಸಿಕೊಳ್ಳಬಾರದು, ಮೋದಿ, ರಾಹುಲ್ ಗಾಂಧಿ ಎಲ್ಲರೂ ದೇಶ ಭಕ್ತರೇ ಯಾರೂ ದೇಶದ್ರೋಹಿಗಳಲ್ಲ. ಅವರ ಚಿಂತನೆಗಳಷ್ಟೇ ಬೇರೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos