ನವದೆಹಲಿ, ಆ. 6: ಬದರಿನಾಥ್ ಹೆದ್ದಾರಿಯಲ್ಲಿ ತೆರಳುತ್ತಿದ್ದ ಬಸ್ ಮೇಲೆ ಬೃಹದಾಕಾರದ ಬಂಡೆಯೊಂದು ಬಿದ್ದ ಪರಿಣಾಮ 7 ಮಂದಿ ಯಾತ್ರಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಬಂಡೆ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಉತ್ತರಾಖಾಂಡದ ಛಮೋಲಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೂಕುಸಿತದ ಪರಿಣಾಮ ಅವಘಡ ಸಂಭವಿಸಿದೆ.
ಒಟ್ಟು 11 ಮಂದಿ ಪ್ರಯಾಣಿಕರು ಬದರಿನಾಥ್ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಬಸ್ನಲ್ಲಿ ಪ್ರಯಾಣ ಬೆಳೆಸಿದ್ದರು. ಬೆಟ್ಟದ ಪಕ್ಕದಲ್ಲಿ ಬಸ್ ಸಂಚರಿಸುವಾಗ ಭೂಕುಸಿತ ಉಂಟಾಗಿದೆ. ಪರಿಣಾಮ ದೊಡ್ಡ ಬಂಡೆಯೊಂದು ಬಸ್ ಮೇಲೆ ಬಿದ್ದು ದುರ್ಘಟನೆ ನಡೆದಿದೆ.